ಬಾಗಲಕೋಟೆ : ಕೃಷ್ಣಾ ನದಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಸುನಿಲ್ ಮೊರಬಗಿ (35) ಎಂದು ಗುರುತಿಸಲಾಗಿದೆ.
ಜಮೀನಿನ ಪಕ್ಕದಲ್ಲಿರುವ ಕೃಷ್ಣಾ ನದಿಯಲ್ಲಿ ಅಳವಡಿಸಲಾಗಿದ್ದ ಪಂಪ್ಸೆಟ್ನ ವಾಲ್ ತಿರುಗಿಸಲು ಸುನಿಲ್ ತೆರಳಿದ್ದರು. ನಿನ್ನೆ ಸಂಜೆ ಪಂಪ್ಸೆಟ್ ವಾಲ್ ತಿರುಗಿಸಲು ನೀರಿನಲ್ಲಿ ಇಳಿದಿದ್ದ ಸುನಿಲ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು. ಇಂದು ಶೋಧ ಕಾರ್ಯಾಚರಣೆ ವೇಳೆ ಸುನಿಲ್ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ ; ಪ್ರಮುಖ ಆರೋಪಿ ಪುಣ್ಯೇಶ್ ಸೇರಿ 9 ಮಂದಿ ಬಂಧನ!



















