ಬೆಂಗಳೂರು: ರಾಜ್ಯದ ರೈತರ ಹಿತ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹಲವು ಘೋಷಣೆ ಮಾಡಿದ್ದಾರೆ. ಹನಿ ನೀರಾವರಿ, ಬಿತ್ತನೆ ಬೀಜ ವಿತರಣೆ, ಕೆರೆಗಳ ಆಧುನೀಕರಣದಿಂದ ಹಿಡಿದು ಕೃಷಿ ಯಂತ್ರೋಪಕರಣಗಳ ವಿತರಣೆವರೆಗೆ ಹಲವು ಘೋಷಣೆ ಮಾಡಿದ್ದಾರೆ. ಹಾಗಾದರೆ, ರಾಜ್ಯದ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದೇನು? ಇಲ್ಲಿದೆ ಮಾಹಿತಿ.
ಕೃಷಿ ಕ್ಷೇತ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳು
• ಉತ್ತರ ಕರ್ನಾಟಕದಲ್ಲಿ ಉತ್ಪಾದಿಸುವ ರೇಷ್ಮೆಯನ್ನು ಕರ್ನಾಟಕದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ. ಇದರ ಸಾಗಣೆ ವೆಚ್ಚ ಕೆ.ಜಿ.ಗೆ 10 ರೂ.ನಿಂದ 20 ರೂ.ಗೆ ಏರಿಕೆ.
• ಬೆಳೆಗಳ ರೋಗ, ಕೀಟಗಳ ನಿಯಂತ್ರಣಕ್ಕಾಗಿ ‘ಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುತ್ತದೆ.
• ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಉತ್ತೇಜನಕ್ಕಾಗಿ ಮಿಲೆಟ್ ಹಬ್’ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ ಗುಣಮಟ್ಟ ಪ್ರಮಾಣೀಕರಣ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ ಜಾರಿಗೊಳಿಸಲಾಗುತ್ತದೆ.
• ಎಐ ತಂತ್ರಜ್ಞಾನದೊಂದಿಗೆ ಕೃಷಿ ಇಲಾಖೆಯ ರೈತ ಕರೆ ಕೇಂದ್ರಗಳ ಉನ್ನತೀಕರಣ. ಇದರಿಂದ ರೈತರಿಗೆ ಅನುಕೂಲ.
• ಬೆಳಗಾವಿ, ಕಲಬುರಗಿಯಲ್ಲಿ ಕುರಿ ಸಾಕಣೆಗೆ ಪ್ರೋತ್ಸಾಹ. ಪಶು ವೈದ್ಯ ಸಂಸ್ಥೆಗಳಿಗಾಗಿ 100 ಕಟ್ಟಡಗಳ ಸ್ಥಾಪನೆಗೆ ಅನುದಾನ.
• ಕೀಟ ಹಾಗೂ ರೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಸ್ಯ ಸಂಜೀವಿನ ಯೋಜನೆ ಜಾರಿ
• ಕಲಬುರಗಿ, ಹಾವೇರಿ, ಪಾಂಡವಪುರ ಸೇರಿ ಹಲವು ನಗರಗಳಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ
ಇದನ್ನೂ ಓದಿ; ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್



















