ಮುಂದಿನ 24ರಿಂದ 34 ಗಂಟೆಯೊಳಗಾಗಿ ಭಾರತ ಸೇನಾ ಕಾರ್ಯಾಚರಣೆ ನಡೆಸಲಿದೆ. ಹೀಗಂತಾ ಪಾಕ್ ಸಚಿವ ಅತಾವುಲ್ಲಾ ತರಾರ್ ಹೇಳಿಕೆ ನೀಡಿದ್ದಾನೆ.
ಅಷ್ಟೇ ಅಲ್ಲಾ ಒಂದೊಮ್ಮೆ ಭಾರತ ಸಮರ ಸಾರಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ಅನುಭವಿಸಬೇಕಾಗುತ್ತದೆ ಅಂತಲೂ ತರಾರ್ ಎಚ್ಚರಿಕೆ ನೀಡಿದ್ದಾನೆ. ನಿನ್ನೆಯಷ್ಟೇ ಮೂರು ವಿಭಾಗಗಳ ಸೇನಾ ಮುಖ್ಯಸ್ಥರೊಟ್ಟಿಗೆ ಮೋದಿ ಸಮಾಲೋಚನೆ ನಡೆಸಿದ ಬೆನ್ನಲ್ಲೇ ಪಾಕ್ ಈ ಹೇಳಿಕೆ ನೀಡಿದೆ.
ಈಗಾಗಲೇ ಭಾರತೀಯ ಸೇನೆಗೆ ಪ್ರಧಾನಿ ಮೋದಿ ಸಂಪೂರ್ಣ ಸ್ವಾತಂತ್ರ ನೀಡಿದ್ದು, ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಸಿಂಧೂ ಜಲ ಒಪ್ಪಂದ ರದ್ದು ಸೇರಿದಂತೆ ಭಾರತದಲ್ಲಿದ್ದ ಪಾಕಿಗಳನ್ನು ಹೊರಗಟ್ಟಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಪಾಕ್ ಹೇಳಿಕೆ ಆ ದೇಶಕ್ಕಾವರಿಸಿರುವ ಭೀತಿಯನ್ನು ಪ್ರತಿಬಿಂಬಿಸುತ್ತಿದೆ.



















