ನವದೆಹಲಿ: ಪಾಕಿಗಳು ಬಾಲ ಬಿಚ್ಚಿದರೆ ನಮ್ಮ ಉತ್ತರ ಹೇಗಿರುತ್ತದೆ ಎನ್ನುವುದು ಈಗಾಗಲೇ ಅವರಿಗೆ ಗೊತ್ತಾಗಿದೆ. ಕದನ ವಿರಾಮ ಉಲ್ಲಂಘಿಸಲು ಧೈರ್ಯ ಮಾಡಿದರೆ, ತಕ್ಕ ಶಾಸ್ತಿ ಕಾದಿದರೆ ಎಂದು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ತಿಳಿಸಿದ್ದಾರೆ.
ಭಾರತೀಯ ನೌಕಾಪಡೆ ಸಂಪೂರ್ಣ ಕಡಲ ಪ್ರಾಬಲ್ಯ ಹೊಂದಿದೆ. ನಮ್ಮ ಶಕ್ತಿ ಈಗಾಗಲೇ ಅನಾವರಣಗೊಂಡಿದೆ. ಬಾಲ ಬಿಚ್ಚಿದರೆ, ಉತ್ತರ ಸಾಮಾನ್ಯವಾಗಿರುವುದಿಲ್ಲ. ಭಯಾನಕವಾಗಿರುತ್ತದೆ ಎನ್ನುವುದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದಿದ್ದಾರೆ.
ಮುದ್ರದಲ್ಲಿ ಭಾರತೀಯ ನೌಕಾಪಡೆಯ ಅಗಾಧ ಕಾರ್ಯಾಚರಣೆಯ ಶಕ್ತಿಯು ನಿನ್ನೆ ಪಾಕಿಸ್ತಾನದ ತುರ್ತು ಕದನ ವಿರಾಮ ಮನವಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದಿದ್ದಾರೆ.