ತುಮಕೂರು : ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾದ ಕಾರಣ, ಮೃತನ ಸಹೋದರಿ ಈ ಬಗ್ಗೆ ಅನುಮಾನಗೊಂಡು ದೂರು ನೀಡಿದ ಹಿನ್ನೆಲೆ, ವ್ಯಕ್ತಿ ಮೃತಪಟ್ಟ 23ದಿನಗಳ ಬಳಿಕ ಪೋಲಿಸರು ಶವ ಪರೀಕ್ಷೆಗೆ ಮುಂದಾಗಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬೂರಿನ ದಾಸರಹಳ್ಳಿಯಲ್ಲಿ ನಡೆದಿದೆ.
ಜನವರಿ 30ರಂದು ಹೃದಯಾಘಾತದಿಂದ ಪರಮೇಶ್ (50) ಮೃತಪಟ್ಟಿದ್ದ ಎನ್ನಲಾಗಿತ್ತು. ಮೃತಪಟ್ಟ ದಿನವೇ ಕಾರ್ಯ ಮಾಡಿ ಪರಮೇಶ್ನನ್ನು ಮಣ್ಣು ಮಾಡಲಾಗಿತ್ತು. ಆದರೇ ಆತ ಮೃತಪಟ್ಟ ಕೆಲವೇ ದಿನಗಳಲ್ಲಿ ಪರಮೇಶ್ ಪತ್ನಿ ಬೇರೊಂದು ಮದುವೆಯಾಗಿದ್ದಾಳೆ.
ಗಂಡನ ಸಾವಿನ ಬಳಿಕ ಪತ್ನಿಯ ಈ ನಡೆಯ ಬಗ್ಗೆ ಅನುಮಾನಗೊಂಡ ಸಂಬಂಧಿಕರು, ಪರಶುರಾಮನ ಸಾವಿನ ಬಗ್ಗೆ ತನಿಖೆ ಮಾಡುವಂತೆ ಮೃತನ ಸಹೋದರಿಹೆಬ್ಬೂರು ಠಾಣೆಯಲ್ಲಿ ದೂರು ನೀಡಿದ್ದು, ಪರಮೇಶ್ ಮೃತಪಟ್ಟಾಗ ಆತನ ಮೂಗಿನ ಪಕ್ಕ ಗಾಯವಾಗಿದ್ದು ಹಾಗೂ ಗುಪ್ತಾಂಗ ಊದಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಹಿನ್ನಲೆ ತುಮಕೂರು ತಹಸಿಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವ ಹೊರ ತೆಗೆದ ಪೊಲೀಸರು, ಅನುಮಾನಸ್ಪದ ಸಾವು ಹಿನ್ನಲೆ ವ್ಯಕ್ತಿ ಮೃತಪಟ್ಟ 23ದಿನಗಳ ನಂತರ ಶವ ಪರಿಕ್ಷೆ ನಡೆಸುತ್ತಿದ್ದಾರೆ. ಒಂದು ವಾರದಲ್ಲಿ ಮರಣೊತ್ತರ ಪರಿಕ್ಷಾ ವರದಿ ಬರುವ ನಿರೀಕ್ಷೆ ಇದ್ದು, ಬಳಿಕ ಪರಮೇಶ್ ಸಾವಿನ ಅಸಲಿ ಕಾರಣ ಪತ್ತೆಯಾಗಲಿದೆ.
ಇದನ್ನೂ ಓದಿ : ಇನ್ಮುಂದೆ ಬೆಂಗಳೂರಲ್ಲಿ ಪಾಸ್ಪೋರ್ಟ್ ವೆರಿಫಿಕೇಶನ್ಗೆ ಹೊಸ ರೂಲ್ಸ್!



















