ಹಾವೇರಿ: ಸರ್ಕಾರದಲ್ಲಿ ಶಾಂತಿ ಇದ್ದರಷ್ಟೆ ಎಲ್ಲವೂ ಸರಿಯಾಗಿರುತ್ತದೆ. ಪ್ರತಿ ದಿನ ಕ್ರಾಂತಿ ಇದ್ದರೆ ಸರ್ಕಾರ ನಡೆಯುವುದು ಹೇಗೆ, ನಮ್ಮಲ್ಲಿ ಸೀನಿಯರ್ಸ್ ಬಹಳ ಇದ್ದಾರೆ ಎಲ್ಲರಿಗೂ ಮಂತ್ರಿ ಆಗಬೇಕು ಎಂದು ಆಸೆ ಇರುತ್ತದೆ, ಮಾಡುವುದು ಬಿಡುವುದು ನಮ್ಮ ವರಿಷ್ಟರಿಗೆ ಬಿಟ್ಟಿದ್ದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾವೇರಿಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ಚುನಾವಣೆ ಎಂದಾಗ ಕಾವು ಇರುತ್ತದೆ. ಇದು ಜಿಲ್ಲಾ ಮಟ್ಟದ ಚುನಾವಣೆ ಒಬ್ಬೊಬ್ಬರು ಒಂದೊಂದು ಸ್ಟೈಲ್ ಇರುತ್ತದೆ ಎಂದು ಹೇಳಿದ್ದಾರೆ.
ಇನ್ನು, ಧರ್ಮಸ್ಥಳ ಕೇಸ್ ನಲ್ಲಿ ಕಾಂಗ್ರೆಸ್ ರಾಜಕೀಯ ನಡೆಯುತ್ತಿದೆ ಎಂಬ ಜೋಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದೇನು ರಾಷ್ಟ್ರೀಯ ವಿಚಾರವೇ?,ಅದರ ಪಾಡಿಗೆ ಅದನ್ನು ಬಿಡಿ. ಕೋರ್ಟ್ ಇದೆ ಅದು ನಿರ್ಣಯ ಮಾಡುತ್ತದೆ, ಧರ್ಮ ರಾಜಕಾರಣ ನಾವು ಮಾಡುತ್ತಿಲ್ಲ, ಬಿಜೆಪಿಯವರು ರಾಜಕೀಯ ಮಾಡಲಿ, ಹೊಸ ವಿಷಯ ಬರುವವರೆಗೆ ಅದು ಮುಂದುವರೆಯುತ್ತದೆ ಎಂದಿದ್ದಾರೆ.
ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ವಿಚಾರದಲ್ಲಿ ಬಿಜೆಪಿ ವಿರೋಧ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಎಲ್ಲದನ್ನೂ ವಿರೋಧ ಮಾಡುತ್ತಾರೆ. ಬಿಜೆಪಿಯವರು ಓಟ್ ಬ್ಯಾಂಕ್ ಪಡೆಯುವುದಕ್ಕೆ ಮಾಡುತ್ತಾರೆ. ಯಾರು ಉದ್ಘಾಟನೆ ಮಾಡಬೇಕು ಎಂದು ಸರ್ಕಾರ ಆಯ್ಕೆ ಮಾಡುತ್ತದೆ. ಅದು ಸರ್ಕಾರದ ಅಧಿಕಾರ, ನಿರ್ಧಾರ. ಸರ್ಕಾರದ ಹಕ್ಕು ಕೋರ್ಟ್ ಗೆ ಹೋದರೂ ಅದು ಸರ್ಕಾರದ ನಿರ್ಧಾರ ಎಂದು ಕೋರ್ಟ್ ಹೇಳುತ್ತದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಬೇಡ ಎನ್ನುವವರೆ ದೊಡ್ಡ ದೊಡ್ಡ ಚೇರ್ ನಲ್ಲಿ ಕುಳಿತಿದ್ದಾರೆ. ಅದೇ ಸಂವಿಧಾನದಿಂದ ಅಧಿಕಾರದಲ್ಲಿ ಕೂತಿದಾರೆ. ಸಂವಿಧಾನ ಬದಲು ಮಾಡುತ್ತೀವಿ. ಎನ್ನುತ್ತಾರೆ ಕನ್ನಡ ತಾಯಿ ಬಗ್ಗೆ ಮುಷ್ತಾಕ್ ಅವರು ಯಾವಾಗ ಏನು ಹೇಳಿದರು ಗೊತ್ತಿಲ್ಲ, ಯಾವಾಗಲೋ ಹೇಳಿದದ್ದನ್ನು ಈಗ ಕನೆಕ್ಟ್ ಮಾಡುವುದಕ್ಕೆ ಆಗಲ್ಲ. ಕನ್ನಡ ತಾಯಿ ನಾವು ಒಪ್ಪಿಕೊಳ್ಳುತ್ತೀವಿ, ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಜಾತಿ ಗಣತಿ ಗಂಭೀರವಾಗಿ ಮಾಡುತ್ತಿಲ್ಲ ಎಂಬ ಆರೋಪ ವಿಚಾರವಾಗಿ, ಇನ್ನೂ ಸಮಯ ಇದೆ ಅದಕ್ಕೆ ಬದಲಾವಣೆ , ತಿದ್ದುಪಡಿಗೆ ಅವಕಾಶ ಇದೆ. ಜಾತಿಗಣತಿ ಹತ್ತು ವರ್ಷದ ಹಿಂದೆ ಆಗಿತ್ತು, ವರದಿ ಮಂಡನೆ ಈ ಮುಂಚೆನೇ ಮಾಡಬೇಕಿತ್ತು ಜಾತಿ ಗಣತಿ ವಿಚಾರದಲ್ಲಿ ನಮ್ಮದೂ ಲೋಪಯಿದೆ ಜಾತಿ ಗಣತಿ ಮಾಡಿ 11 ವರ್ಷ ಆಗಿದೆ. ಹೀಗಾಗಿ, ಹೊಸ ಗಣತಿ ಮಾಡಲಾಗುತ್ತಿದೆ. ಆಯಾ ಜಾತಿಯವರಿಗೆ ನಿಮ್ಮ ನಿಮ್ಮ ಜಾತಿ ಸರಿಯಾಗಿ ಬರೆಸಿ ಎಂದು ಮನವರಿಕೆ ಮಾಡುತ್ತೀವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಿಂದ ಮುಸ್ಲಿಮ್ ತುಷ್ಟೀಕರಣ ಹೆಚ್ಚಾಗಿದೆ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಸ್ಲೀಮರು ಇನ್ನೂ ಗುಡಿಸಲ್ಲಿ ಇದಾರೆ, ಅವರಿಗೆ ಕುಡಿಯುವುದಕ್ಕೆ ನೀರಿಲ್ಲ, ಟಾಯ್ಲೆಟ್ ಇಲ್ಲ ನಾವು ಅವರಿಗೆ ಬಹಳ ದೊಡ್ಡಾದಾಗಿ ಏನೂ ಮಾಡುತಿಲ್ಲ, ಪಾಕಿಸ್ತಾನದ ಜಿಂದಾಬಾದ್ ಅಂತ ಕೂಗಿದವರಿಗೆ ಸಮರ್ಥನೆ ಮಾಡುವುದಕ್ಕೆ ಆಗುವುದಿಲ್ಲ. ಹಾಗೆ ಕೂಗಿದವರನ್ನು ಅರೆಸ್ಟ್ ಮಾಡಿದ್ದಾರೆ, ಓಲೈಕೆ ಮಿತಿ ಮೀರಿಲ್ಲ ಬಿಜೆಪಿಯವರು ಹಾಗೆ ತೋರಿಸುತ್ತಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಪ್ರಚೋದನೆಕಾರಿಯಾಗಿ ಮಾತಾಡಿದರೆ, ಎಲ್ಲಾ ಕಡೆ ಕೇಸ್ ಹಾಕುತ್ತಾರೆ.
ಆಪರೇಷನ್ ಸಿಂಧೂರ್ ನಂತರ ಇಂಡಿಯಾ – ಪಾಕ್ ಕ್ರಿಕೆಟ್ ಮ್ಯಾಚ್ ವಿಚಾರ ಮ್ಯಾಚ್ ಗೆ ಅನುಮತಿ ಕೊಟ್ಟವರು ಯಾರು? ಬೀಪ್ ಸಾಗಿಸುವುದರಲ್ಲಿ ಭಾರತ ನಂಬರ್ 2 ಇದೆ ಬೀಪ್ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಅದನ್ನು ಹೆಚ್ಚಾಗಿ ಎಕ್ಸಪೋರ್ಟ್ ಕೂಡಾ ಮಾಡುತ್ತಿದ್ದಾರೆ. ಅವರೇ ಪರ್ಮಿಷನ್ ಕೊಟ್ಟು ಅವರೇ ವಿರೋಧ ಮಾಡಿದರೆ ಏನು ಮಾಡುವುದು? ಎಂದು ಪ್ರಶ್ನೆ ಮಾಡಿದ್ದಾರೆ.


















