ಬೆಂಗಳೂರು : ನಗರದ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಬೆಂಜ್ ಕಾರೊಂದು ನಡುರಸ್ತೆಯಲ್ಲೇ ಏಕಾಏಕಿ ಹೊತ್ತಿ ಉರಿದಿದೆ.
ಅದೃಷ್ಟವಶಾತ್ ಚಾಲಕ ಹಾಗೂ ಕಾರಿನ ಮಾಲೀಕ ಪಾರಾಗಿದ್ದಾರೆ. ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಕೋರಮಂಗಲ ನಿವಾಸಿ ಡಾ.ನಾಗರಾಜು ಎಂಬುವರಿಗೆ ಸೇರಿದ ಬೆಂಜ್ ಕಾರು ಎಂದು ತಿಳಿದುಬಂದಿದೆ.
ಹೊಗೆ ಕಾಣಿಸ್ತಿದ್ದಂತೆ ಚಾಲಕ ಮತ್ತು ಡಾಕ್ಟರ್ ನಾಗರಾಜು ಕೂಡಲೇ ಕಾರಿನಿಂದ ಇಳಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟು ಭಸ್ಮವಾಗಿತ್ತು. ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ.
ಇದನ್ನೂ ಓದಿ : ಕ್ಯಾರಕಸ್ ನಾಗರಿಕರ ಮೇಲೆ ಅಮೆರಿಕ ದಾಳಿ |ವೆನಿಜುವೆಲಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!



















