ಹಾಸನ: ಮಗ, ಸೊಸೆಗೆ ತಂದೆ ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತು ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ. ಅಖಿಲ್ ಪಾಷ(25) ಸಾವನ್ನಪ್ಪಿದ ಯುವಕ. ತಂದೆ ಸೈಯ್ಯದ್ ಪಾಷಾ, ಮಗ-ಸೊಸೆಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಖಿಲ್ ಪಾಷಾ, ಎರಡು ವರ್ಷಗಳಿಂದ ಪತ್ನಿಯೊಂದಿಗೆ ಅರಸೀಕೆರೆಯ ಟಿಪ್ಪು ನಗರದಲ್ಲಿ ವಾಸಿಸುತ್ತಿದ್ದ.
ಮಗನು ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತರೆ ದಾಖಲಾತಿಗಳು ಹಾಸನದ ತಂದೆಯ ಮನೆಯಲ್ಲಿಟ್ಟಿದ್ದ. ಆದರೆ, ತಂದೆಯ ಬಳಿ ದಾಖಲಾತಿಳನ್ನು ಕೇಳಿದರೆ ದಾಖಲಾತಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ತಂದೆ ಮಗನ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಹಿರಿಯರು ಸೇರಿಕೊಂಡು ರಾಜೀ ಸಂಧಾನ ಮಾಡಿ ಸಮಸ್ಯೆ ಬಗೆಹರಿಸಿದ್ದರು.
ಆದರೂ ತಂದೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮಗ ಪೆನ್ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದ. ಸೈಯದ್ ಪಾಷಾನ ಕರೆಯಿ ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ತಂದೆ ನನ್ನ ಬಲಿ ದಾಖಲಾತಿ ಇಲ್ಲ ಎಂದಿದ್ದರು. ಇದರಿಂದಾಗಿ ಮನನೊಂದ ಮಗ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.