ಬೆಂಗಳೂರು : ಯುಪಿಐ ವಹಿವಾಟು ನಡೆಸುವ ಕಾರಣ ನಾವೀಗ ಎಟಿಎಂಗಳಿಗೆ ಹೋಗಿ ಹಣ ವಿತ್ ಡ್ರಾ ಮಾಡುವ ರೂಢಿಯೇ ಬಹುತೇಕ ತಪ್ಪಿದೆ. ಆದರೂ, ತುರ್ತು ಸಂದರ್ಭಗಳ್ಲಲಿ ಅವಶ್ಯಕತೆ ಇದ್ದಾಗ ಎಟಿಎಂಗಳಿಗೆ ಹೋಗಿ ಹಣ ಡ್ರಾ ಮಾಡುತ್ತೇವೆ. ಹೀಗೆ ಹಣ ಡ್ರಾ ಮಾಡುವಾಗ, ಎಟಿಎಂನಲ್ಲಿ ವಹಿವಾಟು ವಿಫಲವಾದರೆ, ಅದಕ್ಕೆ ಬ್ಯಾಂಕ್ ಕಡೆಯಿಂದ ಗ್ರಾಹಕರಿಗೆ ಪರಿಹಾರ ನೀಡಲಾಗುತ್ತದೆ. ಹೌದು, ನಿಗದಿತ ದಿನಗಳೊಳಗೆ ಬ್ಯಾಂಕ್ ಸಮಸ್ಯೆಯನ್ನು ಬಗೆಹರಿಸಿದರೆ, ಗ್ರಾಹಕರಿಗೆ ನಿತ್ಯ 100 ರೂ. ದಂಡ ಪಾವತಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿಯಮ ರೂಪಿಸಿದೆ.
ಯಾವಾಗ ನಿಯಮ ಅನ್ವಯ?
ನೀವು ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗ, ನಿಮ್ಮ ಖಾತೆಯಿಂದ ಹಣ ಕಡಿತಗೊಂಡು ಕೈಗೆ ನಗದು ಬಾರದೇ ಇದ್ದರೆ ಈ ನಿಯಮ ಅನ್ವಯಿಸುತ್ತದೆ. ಎಟಿಎಂ ವಹಿವಾಟು ವಿಫಲವಾದ ದಿನದಿಂದ 5 ಕೆಲಸದ ದಿನಗಳ ಒಳಗಾಗಿ (T+5 days) ಬ್ಯಾಂಕ್ ನಿಮ್ಮ ಹಣವನ್ನು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಮರಳಿ ಜಮೆ ಮಾಡಬೇಕು ಮಾಡಬೇಕು.
ಒಂದು ವೇಳೆ ಬ್ಯಾಂಕ್ 5 ದಿನಗಳ ಒಳಗಾಗಿ ಹಣವನ್ನು ವಾಪಸ್ ಹಾಕದಿದ್ದರೆ, 6ನೇ ದಿನದಿಂದ ಪ್ರತಿದಿನಕ್ಕೆ 100 ರೂಪಾಯಿಯಂತೆ ಬ್ಯಾಂಕಿನವರು ಗ್ರಾಹಕರಿಗೆ ಪರಿಹಾರ ನೀಡಬೇಕಾಗುತ್ತದೆ. ಇದಕ್ಕೆ ಗ್ರಾಹಕರು ಯಾವುದೇ ದೂರು ನೀಡುವ ಅಗತ್ಯವಿಲ್ಲ, ಬ್ಯಾಂಕ್ ತನ್ನದೇ ತಪ್ಪಿಗೆ ಈ ದಂಡವನ್ನು ಗ್ರಾಹಕರ ಖಾತೆಗೆ ಜಮಾ ಮಾಡಬೇಕು.
ಗ್ರಾಹಕರಿಗೆ ಕೆಲವು ಸಲಹೆಗಳು
- ಎಟಿಎಂನಲ್ಲಿ ಹಣ ಸಿಗದೇ ಖಾತೆಯಿಂದ ಹಣ ಕಡಿತವಾದ ತಕ್ಷಣ, ಆ ವಹಿವಾಟಿನ ರಶೀದಿ ಅಥವಾ ಮೊಬೈಲ್ ಗೆ ಬಂದ ಎಸ್ಎಂಎಸ್ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
- ಒಂದು ವೇಳೆ 5 ದಿನಗಳ ನಂತರವೂ ಹಣ ಮತ್ತು ಆರ್ ಬಿಐ ನಿಯಮದಂತೆ ದಿನಕ್ಕೆ ₹100 ಪರಿಹಾರ ಬರದಿದ್ದರೆ, ನೀವು ತಕ್ಷಣ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಲಿಖಿತ ದೂರು ನೀಡಬಹುದು.
- ಅಲ್ಲಿಯೂ ಪರಿಹಾರ ಸಿಗದಿದ್ದರೆ, ನೀವು ಆರ್ಬಿಐನ ಒಂಬುಡ್ಸ್ ಮನ್ ಪೋರ್ಟಲ್ ನಲ್ಲಿ ದೂರು ದಾಖಲಿಸಬಹುದು. ಕೊನೆಗೆ ಕೋರ್ಟ್ ಮೆಟ್ಟಿಲು ಕೂಡ ಹತ್ತಬಹುದು.
ಇದನ್ನೂ ಓದಿ : ಭಾರತದಲ್ಲಿನ್ನು ವೀಸಾ ಅವಧಿ ಮುಗಿಯುವ ಮುನ್ನವೇ ವಿದೇಶಿಗರ ನೋಂದಣಿ ಕಡ್ಡಾಯ!


















