ಆಂಧ್ರಪ್ರದೇಶ್ : ತೀವ್ರ ಬಿಸಿಲಿನ ಪರಿಣಾಮ ದಾವಣಗೆರೆ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಐಎಂ ಫಯಾಜ್ ಮಹಮ್ಮದ್ (45) ಮೃತ ವ್ಯಕ್ತಿಯಾಗಿದ್ದಾರೆ. ಅವರು ಕುಟುಂಬ ಸಮೇತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿಯ ಗುಡಿಕಲ್ ದರ್ಗಾದ ಉರುಸ್ಗೆ ತೆರಳಿದ್ದರು.
ಉರುಸ್ ಮುಗಿಸಿಕೊಂಡು ಅದೋನಿಯಿಂದ ಬಸ್ ಹತ್ತಲು ಬಂದ ವೇಳೆ ತೀವ್ರ ಬಿಸಿಲಿಗೆ ಕುಸಿದು ಬಿದ್ದ ಫಯಾಜ್ ಅಹಮ್ಮದ್, ಪರಿಣಾಮವಾಗಿ ಗಂಭೀರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಯಾಜ್ ಅಹಮ್ಮದ್ ಮೃತಪಟ್ಟಿದ್ದಾರೆ. ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಅವರ ಪುತ್ರರಾಗಿದ್ದಾರೆ. ಮೃತದೇಹ ಇಂದು ಸಂಜೆ ವೇಳೆಗೆ ಜಗಳೂರಿಗೆ ತರಲಾಗುವ ನಿರೀಕ್ಷೆಯಿದೆ.



















