ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಂಡ್ಲುಪಲ್ಲಿ ಗ್ರಾಮದಲ್ಲಿನ ಕಾಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಇಡೀ ಕಾಡಿಗೆ ಬೆಂಕಿ ಆವರಿಸಿದೆ.
ಇಡೀ ಬೆಟ್ಟ ಧಗಧಗನೇ ಹೊತ್ತಿ ಉರಿಯುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ವನ್ಯಜೀವಿ ಸಂಕುಲ ಸುಟ್ಟು ಕರಕಲಾಗುತ್ತಿದೆ. ಕುರಿಗಾಹಿಗಳು ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಬೆಂಕಿಯ ಕೆನ್ನಾಲಿಗೆಗೆ ಹಚ್ಚ ಹಸುರಿನ ಮರಗಳು ಸುಟ್ಟು ಕರಕಲಾಗಿವೆ.
ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದಾಗಿ ಅಪಾರ ಕಾಡಿನ ಸಂಪತ್ತು ನಾಶವಾಗುವುದರೊಂದಿಗೆ ಅದರಲ್ಲಿ ವಾಸಿಸುತ್ತಿದ್ದ ಕಾಡು ಪ್ರಾಣಿಗಳು, ಪಕ್ಷಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಕಿಡಿಗೇಡಿಗಳ ಕೃತ್ಯ ಬೇಧಿಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ರೈಲು ಹಳಿ ಮೇಲೆಯೇ ಕೆಟ್ಟು ನಿಂತ BMTC ಬಸ್.. ಸಾರಿಗೆ ಸಚಿವರ ಹುಟ್ಟೂರಲ್ಲಿ ತಪ್ಪಿದ ಭಾರೀ ದುರಂತ



















