ಬೆಂಗಳೂರು | ಬೆಂಗಳೂರಿನ ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿದ್ದ ಚಿನ್ನಾಭಾರಣ ಕಳ್ಳತನ ಆರೋಪ ಪ್ರಕರಣ ಸಂಬಂಧ ಮುಜರಾಯಿ ಇಲಾಖೆಯ EO ನಾಗರಾಜ್ರನ್ನು ಅಮಾನತು ಮಾಡಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.

EO ನಾಗರಾಜ್ 122 ಗ್ರಾಂ ತೂಕದ ದೇವಿಯ ಆಭರಣ ಕದ್ದಿದ್ದಾರೆ ಎಂದು ಧರ್ಮರಾಯಸ್ವಾಮಿ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದ್ದರು. ಆರ್ಟಿಐ ಹಾಕಿ ಪಡೆದ ಮಾಹಿತಿಯಲ್ಲಿ ಚಿನ್ನಾಭರಣವನ್ನ EO ಕೊಂಡೊಯ್ದರುವುದು ದೃಢವಾಗಿದೆ ಎನ್ನಲಾಗಿದೆ. ಹಾಗಾಗಿ EO ನಾಗರಾಜ್ರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

EO ನಾಗರಾಜ್ ವಿರುದ್ದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರ ಆರೋಪವೇನು?
ಮುಜರಾಯಿ ಇಲಾಖೆ EO ನಾಗರಾಜ್ ಅವ್ರು ಕಾನೂನು ಉಲ್ಲಂಘಿಸಿದ್ದಾರೆ. ಹುಂಡಿ ಎಣಿಸುವಾಗ 63 ಗ್ರಾಮ್ ನೆಕ್ಲೇಸ್ ಸಿಕ್ಕಿತ್ತು. ಅದನ್ನು EO ನಾಗರಾಜ್ ಅವರು ಜೇಬಿಗೆ ಹಾಕ್ಕೊಂಡು ಹೋಗಿದ್ದಾರೆ. ಇದನ್ನು ಮುಜರಾಯಿ ಇಲಾಖೆ ಇತರೆ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ರು. ನಾನು ಆರ್ಟಿಐ ಹಾಕಿ ಹಾಗೂ ವಿಡಿಯೋ ಪರಿಶೀಲಿಸಿದಾಗ ವಿಚಾರ ಬಯಲಾಗಿದೆ ಎಂದು ಧರ್ಮರಾಯಸ್ವಾಮಿ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸಿಸಿಟಿವಿ ಫೂಟೇಜ್ ಕೂಡ ಇದೆ. ಇದನ್ನ EO ನಾಗರಾಜ್ ಒಪ್ಕೊಂಡಿದ್ದಾರೆ. ಮುಜರಾಯಿ ಇಲಾಖೆಯಲ್ಲಿ 36 ಸಾವಿರ ದೇವಸ್ಥಾನ ಇದೆ. ಇದರ ಕಾನೂನು ಪ್ರಕಾರ ದೇವಸ್ಥಾನದ ಯಾವ ಆಸ್ತಿಯೂ ದೇವಸ್ಥಾನದ ಆವರಣ ಬಿಟ್ಟು ಹೋಗೋ ಆಗಿಲ್ಲ. ಹೋದರೂ ಅದಕ್ಕೆ ಸೂಕ್ತ ಪ್ರಕ್ರಿಯೆ ಇದೆ. ಇದಾವುದನ್ನೂ ಪಾಲಿಸದೆ ಅಧಿಕಾರಿ ಜೇಬಿಗೆ ಹಾಕ್ಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ | ಹೊಸ ಪ್ರೈವೆಸಿ ಫೀಚರ್ ಮತ್ತು ಶಕ್ತಿಶಾಲಿ ಕ್ಯಾಮೆರಾದೊಂದಿಗೆ ಎಂಟ್ರಿಗೆ ಸಜ್ಜು!


















