ಅಹಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರುಪಾನಿ ಬಲಿಯಾಗಿದ್ದಾರೆ. ನಿನ್ನೆಯಷ್ಟೇ, ರುಪಾನಿ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದರು.
ಈ ನಡುವೆ, ರುಪಾನಿ ನಿವಾಸಕ್ಕೆ ಭೇಟಿ ನೀಡಿದ ಗೌತಮ್ ಅದಾನಿ, ಕೂಡಾ ಕಂಬನಿ ಮಿಡಿದ್ದಾರೆ. ಈ ನಡುವೆ, ವಿದೇಶದಲ್ಲಿದ್ದ ರುಪಾನಿ ಪುತ್ರ ಭಾರತಕ್ಕೆ ವಾಪಸ್ ಆಗಿದ್ದಾರೆ. ಇತ್ತ ಪತನವಾದ ವಿಮಾನದ ಪೆಲೈಟ್ ಆಗಿದ್ದ ಸುಮಿತ್ ಸವರ್ವಾಲ್ ಮೃತದೇಹ ಪತ್ತೆ ಕಾರ್ಯ ಮುಂದುವರಿದೆ. ಈ ನಿಟ್ಟಿನಲ್ಲೇ, ಸಬರ್ವಾಲ್ ನಿವಾಸಕ್ಕೆ ಭೇಟಿ ನೀಡಿದ ಲ್ಯಾಬ್ ಸಿಬ್ಬಂದಿ, ಅವರ ತಂದೆಯ ಡಿಎನ್ ಎ ಸ್ಯಾಂಪಲ್ ಸಂಗ್ರಹಿದ್ದಾರೆ. ನಿನ್ನೆಯೇ ನಾಲ್ವರ ಮೃತದೇಹದ ಡಿಎನ್ ಎ ಪರೀಕ್ಷೆ ಅಂತ್ಯವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.