2ನೇ ಮದುವೆಗೆ ಸಜ್ಜಾಗಿದ್ದ ಪತಿರಾಯನಿಗೆ ಮೊದಲ ಪತ್ನಿ ಕಲ್ಯಾಣ ಮಂಟಪದಲ್ಲೇ ಚಪ್ಪಲಿ ಸೇವೆ ಮಾಡಿದ ಘಟನೆ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ವರದಕ್ಷಿಣೆ ದುರಾಸೆಗೆ ಮತ್ತೊಂದು ವಿವಾಹ ಆಗಲು ಸಜ್ಜಾಗಿದ್ದವನಿಗೆ ಮೊದಲ ಪತ್ನಿಯೇ ಕಂಟಕವಾಗಿದ್ದು, ಕಲ್ಯಾಣಕ್ಕೆ ಬ್ರೇಕ್ ಬಿದ್ದಿದೆ.
5 ವರ್ಷದ ಹಿಂದೆ ತನುಜಾ ಜೊತೆ ಕಾರ್ತಿಕ್ ತುಳಿದಿದ್ದ ಸಪ್ತಪದಿ
ಅಂದಹಾಗೆ ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆ ಬಳಿಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್ ಐದು ವರ್ಷಗಳ ಹಿಂದೆ ತನುಜಾ ಎಂಬುವವರ ಜೊತೆ ಹಸೆಮಣೆ ಏರಿದ್ದ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾರನ್ನು ಅರ್ಧಾಂಗಿಯಾಗಿ ಸ್ವೀಕರಿಸಿದ್ದ. ಆನಂತರ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ದುಡ್ಡಿನ ಆಸೆಗೆ 2ನೇ ವಿವಾಹ?
ಈ ಮಧ್ಯೆ ಕಾರ್ತಿಕ್ ನಾಯ್ಕ್ ಯಾರಿಗೂ ಗೊತ್ತಾಗದಂತೆ 2ನೇ ವಿವಾಹವಾಗಲು ಮುಂದಾಗಿದ್ದ. ಚಿತ್ರದುರ್ಗದಲ್ಲಿ 2ನೇ ಮದುವೆ ಫಿಕ್ಸ್ ಮಾಡಿದ್ದ. ಕಲ್ಯಾಣ ಮಂಟಪ ಬುಕ್ ಮಾಡಿ ಮದುವೆ ಹಿಂದಿನ ದಿನದ ಶಾಸ್ತ್ರನೂ ಮುಗಿಸಿದ್ದ. ಈ ವಿಚಾರ ಹೇಗೋ ಮೊದಲ ಪತ್ನಿಯ ಕಿವಿಗೆ ಬಿದ್ದಿದೆ. ಸುದ್ದಿ ತಿಳಿದು ಕುಟುಂಬಸ್ಥರೊಂದಿಗೆ ಮಂಟಪಕ್ಕೆ ಬಂದ ಮೊದಲು ಪತ್ನಿ ತನುಜಾ, ಪತಿರಾಯನಿಗೆ ಸಂಬಂಧಿಕರ ಎದುರೇ ಚಪ್ಪಲಿಯಲಲ್ಲಿ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾಳೆ. ಹೀಗಾಗಿ ಕಾರ್ತಿಕ್ 2ನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.