ಮೇ 6ರ ನಟ್ಟ ನಡುರಾತ್ರಿಯ ಕಾರ್ಗತ್ತಲಲ್ಲಿ ನುಗ್ಗಿ ಬಂದಿದ್ದ ರಫೇಲ್ ಯುದ್ಧ ವಿಮಾನದಿಂದ ಸಿಡಿದಿತ್ತು. ದೈತ್ಯ ಹ್ಯಾಮರ್ ಕ್ಷಿಪಣಿ. ಅಷ್ಟೇ ನೋಡ ನೋಡುತ್ತಿದ್ದಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಾವಲ್ಪುರ ಸಂಪೂರ್ಣ ಚಿಂದಿಯಾಗಿತ್ತು. ಲಕ್ಷರ್ ಎ ತೋಯ್ಬಾದ ಕೇಂದ್ರ ಕಚೇರಿ ಛಿದ್ರಛಿದ್ರವಾಗಿತ್ತು. ಅದರಲ್ಲೂ ಜೈಶ್ ಸಂಸ್ಥಾಪಕ ಮಸೂರ್ ಅಜರ್ ಭಾರತದ ಪ್ರಹಾರಕ್ಕೆ ಹತನಾಗಿಬಿಟ್ನಾ ಎನ್ನುವ ಗುಮಾನಿ ಮೂಡಿದೆ.
ಮರ್ಕಜ್ ನ ಸುಭಾನಿ ಮಸೂದಿಯಲ್ಲಿದ್ನಾ ಮಸೂದ್ ಅಜರ್
ಹಾಗೆ ನೋಡಿದರೆ ಭಾವಲ್ಪುರ.ಉಗ್ರ ಮಸೂದ್ ಅಜರ್ ನ ತವರು. ಇಲ್ಲೇ ಹುಟ್ಟಿ ಬೆಳೆದ ಮಸೂದ್ ಧರ್ಮಾಂಧನಾಗಿ ಪರಿವರ್ತನೆಯಾಗಿದ್ದು ಇತಿಹಾಸ. ಇಲ್ಲಿನ ಮರ್ಕಜ್ ನಲ್ಲಿರುವ ಸುಭಾನ್ ಮಸೀದಿಯೇ ಜೈಶ್ ಸಂಘಟನೆಯ ಕೇಂದ್ರ ಕಚೇರಿ. ಇಲ್ಲಿದಂಲೇ ಮಸೂದ್ ತನ್ನ ಪಾಪದ ಸಾಮ್ರಾಜ್ಯವನ್ನು ಆಳುತ್ತಿದ್ದ. ಆದರೆ ಆ ಮಸೂದ್ ಮೇಲೆ ದಶಕಗಳಿಂದ ಕಣ್ಣಿಟ್ಟಿದ್ದ ಭಾರತ ಕಡೆಗೂ ತನ್ನ ಕಾರ್ಯ ಸಾಧಿಸಿದೆ. ಹಾಗಂತ ಮಂಗಳವಾರ ರಾತ್ರಿಯ ಕಾರ್ಯಾಚರಣೆ ವೇಳೆ ಮಸೂದ್ ಇದೇ ಸುಭಾನ್ ಮಸೀದಿಯಲ್ಲಿ ಇದ್ದನಾ?. ತನ್ನ ಕುಟುಂಬದವರೊಟ್ಟಿಗಿದ್ದಾಗಲೇ ಸೈತಾನ್. ಕ್ಷಿಪಣಿ ರೂಪದಲ್ಲಿ ಬಂದಪ್ಪಳಿಸಿದ್ದನಾ ಎನ್ನುವ ಪ್ರಶ್ನೆ ಆವರಿಸಿದೆ.
ದಾಳಿ ಬೆನ್ನಲ್ಲೇ ಹೊರಬಿದ್ದಿತ್ತು ಮಸೂದ್ ಹೇಳಿಕೆ
ಅಸಲಿಗೆ 56 ವರ್ಷದ ಮಸೂದ್ ಅಜರ್ ಮುಂಬೈ, ಪಠಾಣ್ ಕೋಟ್, ಸಂಸತ್ ದಾಳಿಗಳನ್ನು ಸೃಷ್ಟಿಸಿದ ವಿದ್ವಂಸಕ. ಈ ಮಸೂದ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ. ಆಪರೇಷನ್ ಸಿಂಧೂರ್ ನಲ್ಲಿ ಮಸೂದ್ ಹತನಾಗಿರಬೇಕು ಎನ್ನುವುದಕ್ಕೆ ಕೆಲ ಬೆಳವಣಿಗೆಗಳು ಸಾಕ್ಷಿಯಾಗುತ್ತಿವೆ. ಹೌದು, ಭಾರತದ ದಾಳಿಯಲ್ಲಿ ತನ್ನ ಸಹೋದರಿ, ಸಹೋದರ, ಸಹಚರರು ಸೇರಿ 14 ಮಂದಿ ಹತರಾಗಿದ್ದಾರೆ.
ಆ ದೇವರು ನನ್ನನ್ನೂ ಕರೆದುಕೊಂಡು ಬಿಟ್ಟಿದ್ದರೆ ಒಳ್ಳೆಯದಾಗಿರುತ್ತಿತ್ತು ಅಂತಾ ಮಸೂದ್ ಹೆಸರಿನ ಹೇಳಿಕೆ ರಿಲೀಸ್ ಆಗಿದೆ. ಇನ್ನೊಂದೆಡೆ, ಕುಟುಂಬಸ್ತರ ಅಂತ್ಯಸಂಸ್ಕಾರದಲ್ಲಿ ಸ್ವತ ಪಾಕ್ ಆರ್ಮಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಹಾಗಿದ್ದರೆ ಅಜರ್ ಬದುಕಿದ್ದರೆ ಯಾಕೆ ವಿಡಿಯೋ ಸಂದೇಶ ಬಿಡುಗಡೆ ಆಗಲಿಲ್ಲ. ಅಜರ್ ಸಂಬಂಧಿಕರು ಸತ್ತಿದ್ದರೆ ಪಾಕ್ ಸೇನಾಧಿಕಾರಿಗಳು ಯಾಕೆ ಬಂದರು ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಹಾಗಂತಾ ನಿಜಕ್ಕೂ ಆಪರೇಷನ್ ಸಿಂಧೂರ್ ನಲ್ಲಿ ಅಜರ್ ಸಮಾಧಿಯಾಗಿದ್ದರೆ, ಇದು ಭಾರತದ ಅತಿದೊಡ್ಡ ಗೆಲುವಾಗಲಿದೆ. ಅಷ್ಟೇ ಅಲ್ಲಾ ನೂರಾರು ಅಮಾಯಕರ ನೆತ್ತರು ಕುಡಿದ ರಣಹದ್ದಿನ ಅಂತ್ಯ ಘನಘೋರವಾಗಿತ್ತಲ್ಲ ಎನ್ನುವ ತೃಪ್ತಿ ಪ್ರತಿ ಭಾರತೀಯನಿಗೆ ಸಂತೃಪ್ತಿ ತರುತ್ತದೆ.



















