ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಶೂಟೌಟ್ ಆಗಿರುವ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಗುಂಡಿನ ದಾಳಿಗೆ ಒಳಗಾಗಿರುವ ರಿಕ್ಕಿ ರೈ ರಷ್ಯಾದಿಂದ ಪ್ರಕರಣವೊಂದಕ್ಕೆ ರಾಜಿಯಾಗುವುದಕ್ಕಾಗಿ ದೇಶಕ್ಕೆ ಮರಳಿದ್ದರು. ನಿತೇಶ್ ಜೊತೆಗೆ ಪ್ರಕರಣವೊಂದರ ರಾಜಿಗಾಗಿ ಅವರು ಬಂದಿದ್ದರು. ರಿಕ್ಕಿ ತಂದೆ ಮುತ್ತಪ್ಪ ಹಾಗೂ ನಿತೇಶ್ ಮಧ್ಯೆ ದಶಕದ ಹಿಂದೆ ಭೂ ಅವ್ಯವಹಾರದ ತಕರಾರು ಇತ್ತು. ಈ ಕುರಿತು ರಾಜಿ ಸಂಧಾನ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ರಿಕ್ಕಿ ರೈ, ನಿತೇಶ್ ಕಂಪನಿಗೆ 70 ಕೋಟಿ ರೂ. ಕೊಡಬೇಕೆಂಬುವುದು ಒಪ್ಪಂದವಾಗಿತ್ತು ಎನ್ನಲಾಗಿದೆ.
ಆದರೆ, ಆ ಹಣ ನೀಡಲು ರಿಕ್ಕಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಅಲ್ಲದೇ, ಮುತ್ತಪ್ಪ ರೈ ಅವರ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ಮೇಲೆಯೂ ರಿಕ್ಕಿಗೆ ದ್ವೇಷ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಇಬ್ಬರನ್ನೂ ಜೈಲು ಸೇರಿಸುವುದಕ್ಕಾಗಿ ಶೂಟೌಟ್ ನಾಟಕವಾಡಿದ್ದಾರೆ ಎಂದು ತಿಳಿದು ಬಂದಿದೆ.
ಶೂಟೌಟ್ ದಿನ ರಿಕ್ಕಿ ಕಾರಿನ ಮೇಲೆ ಎರಡು ಬಾರಿ ಫೈರಿಂಗ್ ಮಾಡಿಲಸಾಗಿದೆ. ಮೊದಲಿಗೆ ಕಾರಿನ ಮೇಲೆ ಫೈರಿಂಗ್ ನಡೆಸಿದಾಗ ಬುಲೆಟ್ ಕಾರಿನ ಟೈರ್ ಭಾಗಕ್ಕೆ ಬಿದ್ದಿದೆ. ಆ ವೇಳೆ ಕಾರಿಗೆ ಯಾವುದೇ ಡ್ಯಾಮೇಜ್ ಆಗಿಲ್ಲ.
ಇದಾದ ನಂತರ ಮತ್ತೆ ಕಾರ್ ನ್ನು ಮರಳಿ ಬಿಡದಿ ಮನೆಗೆ ತಿರುಗಿಸಿ ಮತ್ತೆ ಕಾರಿನ ಡೋರ್ ಮೇಲೆ ಫೈರಿಂಗ್ ಮಾಡಿಸಿದ್ದಾರೆ ಎನ್ನಲಾಗಿದೆ.
ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಹಾಗೂ ಆತನ ಕೆಲವು ಆಪ್ತರಿಗೆ ಸಂಕಷ್ಟ ಎದುರಾಗಿದೆ. ರಿಕ್ಕಿ ರೈಗೆ ಈಗಾಗಲೇ ನೋಟಿಸ್ ಜಾರಿಯಾಗಿದ್ದು, ಯಾವೂದೇ ಕ್ಷಣದಲ್ಲಾದರೂ ರಿಕ್ಕಿ ರೈ ಬಂಧನವಾಗುವ ಸಾಧ್ಯತೆ ಇದೆ.