ಚಿಕ್ಕಬಳ್ಳಾಪುರ: ರೈಲ್ವೇ ಪರೀಕ್ಷೆ ಪ್ರವೇಶ ಪರೀಕ್ಷೆಯಲ್ಲಿ ಮಂಗಳ ಸೂತ್ರ ತೆಗೆಯುವಂತೆ ನಮೂದಿಸಿದ್ದ ವಿಚಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ದ ಸಚಿವ ಡಾ. ಎಂ.ಸಿ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರಿದ್ರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಕನಿಷ್ಟ ಜ್ಞಾನ ಇಲ್ಲ ಎಂದು ಆರ್. ಅಶೋಕ್ ಹೇಳಿದ್ದಾರೆ. ನಿಮ್ಮ ಪದಬಳಕೆಯಲ್ಲೇ ಗೊತ್ತಾಗುತ್ತೆ ನಿಮಗೆ ಎಷ್ಟರ ಮಟ್ಟಿಗೆ ಜ್ಞಾನ, ವಿದ್ಯಾರ್ಹತೆ ಇದೆ ಎಂದು. ಅಶೋಕ್ ಅವರ ಸಾಮಾಜಿಕ ಕಳಕಳಿ ಬಗ್ಗೆ ಬಿಜೆಪಿಯವರು ಹೇಳಿದ್ದಾರೆ. ಮಂಗಳ ಸೂತ್ರ ತೆಗಿಸಿ ಅಂತ ನರೇಂದ್ರ ಮೋದಿಯರು ಹೇಳಿದ್ರಾ? ಸಾರ್ವಜನಿಕವಾಗಿ ವಿರೋದ ವ್ಯಕ್ತವಾದ ಮೇಲೆ ಆದೇಶ ಹಿಂಪಡೆದಿದ್ದಾರೆ. ಸಿದ್ದರಾಮಯ್ಯನವರ ಮೇಲೆ ಮಾತಾನಾಡ್ತೀರಾ? ನಾವು ಮೋದಿ ವಿರುದ್ದ ಮಾತಾಡಬಹುದಾ? ಅಷ್ಟೊಂದು ಕೀಳು ಮಟ್ಟದ ರಾಜಕೀಯವನ್ನು ಆರ್. ಅಶೋಕ್ ಮಾಡುತ್ತಿದ್ದಾರೆ. ವಿರೋದ ಪಕ್ಷದ ಸ್ಥಾನಕ್ಕೆ ಅದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.