ಬೆಂಗಳೂರು : ಇದೇ ಬರುವ ಮೇ 10ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರ ‘ಆರ್ಟ್ ಆಫ್ ಲಿವಿಂಗ್‘ನ ವರ್ಷಾಚರಣೆ ಹಾಗೂ ಈ ಸಂಸ್ಥೆಯ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗಿರುವ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯಲಿದೆ.
ಇದೇ ವೇಳೆ ಆಶ್ರಮದ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಧ್ಯಾನ ಮಂದಿರ ಉದ್ಘಾಟನೆಯಾಗಲಿದ್ದು, ಹಲವು ವಿಶೇಷಗಳನ್ನು ಹೊಂದಿರುವ ಧ್ಯಾನ ಮಂದಿರದ ಅನಾವರಣದ ಜತೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಆರ್ಟ್ ಆಫ್ ಲಿವಿಂಗ್ನ ಈ ನೂತನ ಧ್ಯಾನಮಂದಿರದಲ್ಲಿ ವರ್ಲಿ, ಮಧುಬನಿ, ಪಟ್ಟಚಿತ್ತ, ತಂಜಾವೂರು, ಸೋಹ್ರಾಹ್, ಕೊಹ್ಬರ್, ಗೊಂಡ್ ಮತ್ತು ಪಿಚ್ವಾಯಿ ಕಲೆಗಳನ್ನು ಬಳಕೆ ಮಾಡಲಾಗಿದ್ದು, ಈ ಸುಂದರ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲು ಅಂದಿನಿಂದ ಅವಕಾಶ ಸಿಗಲಿದೆ.
ಇದನ್ನೂ ಓದಿ : ಫೋರ್ಸ್ ಮೋಟಾರ್ಸ್ನಿಂದ ಹೊಸ ‘ಟ್ರಾವೆಲರ್ ಎನ್’ ಸರಣಿ ಲಾಂಚ್ – ಆಕರ್ಷಕ ವಿನ್ಯಾಸ, ಭರ್ಜರಿ ಫೀಚರ್ಸ್!



















