ಮಂಡ್ಯ: ಮದ್ದೂರು ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್ ನಿರ್ಬಂಧ ಹಿನ್ನೆಲೆ, ಹಿಂದೂ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ಗಡಿ ಭಾಗ ನಿಡಘಟ್ಟ ಬಳಿಯಿಂದಲೆ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಾಪಾಸ್ ಕಳುಹಿಸಿದ್ದಾರೆ. ಈ ಬಗ್ಗೆ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಮಾತನಾಡಿದ ಮುತಾಲಿಕ್, ಪೊಲೀಸರು, ನಾವು ಯಾಕೆ ಹೋಗುತಿದ್ದೀವಿ ಎಂದು ಗೊತ್ತಿಲ್ಲದೆ ಸರ್ಕಾರದ ಮಾತು ಕೇಳಿ ತಡೆದಿದ್ದಾರೆ. ಕಾನೂನು ಏನು ಹೇಳತ್ತದೆ ಅದನ್ನು ಪೊಲೀಸರು ಪಾಲಿಸಿದ್ದಾರೆ ಎಂದು ಹೇಳಿದ್ದಾರೆ.
ಧರ್ಮ, ದೇಶದ ಬಗ್ಗೆ ಆಲೋಚಿಸಿ. ಇಂದು ಗಣೇಶನ ಮೇಲೆ ಕಲ್ಲು ಹೊಡೆದಿದ್ದಾರೆ. ಮುಂದೆ ಮನೆಗೆ ನುಗ್ಗಿ ಹೊಡಿತಾರೆ. ಇಂತಹ ದೇಶದ್ರೋಹಿಗಳನ್ನು ತಡೆಯದೆ ಇದ್ದರೆ ಮುಂದೆ ಗಂಭೀರ ಸಮಸ್ಯೆ ಆಗಲಿದೆ. ನಾವು ನಮ್ಮ ಕಾರ್ಯಕರ್ತರನ್ನು ಬಿಡಿಸಿಕೊಂಡು ಹೊಗಲು ಬಂದಿದ್ದೇವೆ ಗಲಾಟೆ ಮಾಡಲು ಅಲ್ಲ ಎಂದು ತಿಳಿಸಿದ್ದಾರೆ.
ಪ್ಯಾಲೆಸ್ಟೈನ್ ಧ್ವಜ ಹಾರಿಸಿ, ನಮ್ಮ ದೇವರ ಮೇಲೆ ಉಗುಳಿ ನಮ್ಮನ್ನು ಪ್ರಚೋದನೆ ಮಾಡುತ್ತಿದ್ದಾರೆ. ನಾವು ಎಲ್ಲಿ ಬೇಕಾದರೂ ಹೋಗಲು ಸಂವಿಧಾನ ಸ್ವಾತಂತ್ರ್ಯ ಕೊಟ್ಟಿದೆ. ನಮ್ಮನ್ನು ಇಂದು ತಡೆದು ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ. ನೋಟಿಸ್ನಲ್ಲಿ ನನ್ನ ವಿರುದ್ದ 30 ಕೇಸ್ ಇದೆ ಎಂದಿದ್ದಾರೆ. ಆದರೆ ಇದು ಸುಳ್ಳು ಎಂದು ಸಾಬೀತಾಗಿದೆ ಎಂದಿದ್ದಾರೆ.
ಗಣೇಶನ ಮೇಲೆ ಕಲ್ಲು ಎಸೆದವರ ಮೇಲೆ ಗುಂಡು ಹಾರಿಸಬೇಕು. ನಮ್ಮ ಅನ್ನ ತಿಂದು ನಮ್ಮ ಗಣೇಶನ ಮೇಲೆ ಕಲ್ಲು ಎಸಿಯುತ್ತಾರೆ ಎಂದರೆ ಇವರಿಗೆಷ್ಟು ಸೊಕ್ಕು. ಪ್ಯಾಲೆಸ್ಟೈನ್ ಧ್ವಜ ಹಿಡಿತಾರೆ ಕರ್ನಾಟಕದ ಮುಸ್ಲಿಮರಿಗೂ ಪ್ಯಾಲೆಸ್ಟೈನ್ ಗೂ ಏನ್ ಸಂಬಂಧ. ಇಂತವರನ್ನು ಸರ್ಕಾರ ಬೆಳೆಸುತ್ತಿದೆ. ನಾವೇನಾದರೂ ಕಲ್ಲು ಬಾಂಬು ಹಿಡಿದುಬಿಟ್ಟರೆ ಅವರು ಯಾರು ಉಳಿಯುವುದಿಲ್ಲ ಎಂದು ಹೇಳಿದ್ದಾರೆ.



















