ಯಾದಗಿರಿ: ಮೊಹರಂ ದೇವರು ಹಿಡಿಯುವ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿರುವ ಘಟನೆ ನಡೆದಿದೆ.
ಈ ವೇಳೆ ಎರಡು ಸಮುದಾಯದ ಜನರ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹಳಿಸಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಜುಲೈ 1ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಎರಡು ಕಡೆಯ ಮೂರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ವಾಲ್ಮೀಕಿ ಸಮುದಾಯದ ವ್ಯಕ್ತಿ ದೇವರು ಹಿಡಿಯುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅಲೈ ದೇವರು ಹಿಡಿಯೋದ್ದನ್ನು ಬಿಟ್ಟಿದ್ದರು. ಆದರೆ ಮೊನ್ನೆ ದೇವರನ್ನು ಪ್ರತಿಷ್ಠಾಪನೆ ಮಾಡುವಾಗ ದೇವರು ಹಿಡಿಯೋದ್ದನ್ನು ಬಿಟ್ಟಿದ್ದ.
ಹೀಗಾಗಿ ವ್ಯಕ್ತಿಯ ಮೈಯಲ್ಲಿ ದೇವರು ಬಂದಿದ್ದ ಎನ್ನಲಾಗಿದೆ. ನಾಲ್ಕು ವರ್ಷದಿಂದ ದೇವರು ಹಿಡಿಯೋದ್ದನ್ನ ಬಿಟ್ಟಿದ್ದ ವ್ಯಕ್ತಿಗೆ ಈಗ ಹೇಗೆ ಬಂದಿದೆ ಅಂತ ಇನ್ನೊಂದು ಸಮುದಾಯದ ಜನ ಗೇಲಿ ಮಾಡಿದ್ದರು. ಇದೇ ಕಾರಣಕ್ಕೆ ಎರಡು ಸಮುದಾಯದ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



















