ದಾವಣಗೆರೆ : ಜಿಲ್ಲೆಯ ಚನ್ನಗಿರಿಯ ಸೂಳೆಕೆರೆ ಸಮೀಪ ತೋಟದ ಕೆಲಸಕ್ಕೆ ತೆರಳುತ್ತಿದ್ದ ರೈತರ ಮೇಲೆ ತಾಯಿ ಚಿರತೆ ದಾಳಿ ಮಾಡಿದೆ. ಭದ್ರಾ ನಾಲೆಯಲ್ಲಿ ಚಿರತೆ ಮರಿಗಳು ನೀರು ಕುಡಿಯುತ್ತಿದ್ದಾಗ ರೈತರು ಪಾಸ್ ಆಗಿದ್ದಾರೆ. ನೀರು ನಾಯಿ ಇರಬೇಕು ಆಂತಾ ಮುಂದೆ ಸಾಗಿದ್ದಾರೆ.
ಆಗ ಎರಡು ಮರಿ ಜೊತೆ ನೀರು ಕುಡಿದು ತೋಟದಲ್ಲಿ ಅವತಿದ್ದ ಚಿರತೆ ಬೈಕ್ ಮೇಲಿದ್ದ ಇಬ್ಬರ ಮೇಲೆ ದಾಳಿ ಮಾಡಿದೆ. ಬೆನ್ನು ಪರಚಿ ಬಟ್ಟೆಯನ್ನ ಹರಿದಿದೆ. ಚಿರತೆ ದಾಳಿ ಬಳಿಕ ಕೆರೆ ಬಿಳಿಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೈತರು ಚಿಕಿತ್ಸೆ ಪಡೆದಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಭಾವಿ ಪತ್ನಿಯನ್ನು ಭೇಟಿಯಾಗಲು ವಯಾಗ್ರ ಮಾತ್ರೆ ಸೇವನೆ : ಓವರ್ಡೋಸ್ನಿಂದ ಯುವಕ ದುರಂತ ಅಂತ್ಯ!


















