ಹಾವೇರಿ: ಎಸ್ಸಿ, ಎಸ್ಟಿ ಸೇರಿದಂತೆ ದೊಡ್ಡ ಮಟ್ಟದ ಜನಬೆಂಬಲ ನಮ್ಮ ಕಡೆಯಿದೆ. ಆದ್ದರಿಂದ ಆಶ್ಚರ್ಯಕರ ಫಲಿತಾಂಶ ಮೂಲಕ ಮೊದಲ ಬಾರಿಗೆ ದಾವಣಗೆರೆಯಲ್ಲಿ ಬಿಜೆಪಿ ಭಾವುಟ ಹಾರಿಸ್ತೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣಾ ವಿಚಾರವಾಗಿ ಹಾವೇರಿಯ ತಡಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ದಾವಣಗೆರೆಯಲ್ಲಿ ಸ್ಟ್ರಾಟೆಜಿಕ್ ಆಗಿ ಟಿಕೆಟ್ ಹಂಚಿಕೆಯಾಗಿದೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ವಿಜಯ ಪಥದಲ್ಲಿ ಹೀಗಾಗಲೇ ಮುಂದಿದ್ದೇವೆ. ಇದರಲ್ಲಿ ಯಾವುದೇ ಎರಡೂ ಮಾತಿಲ್ಲ.ಈ ಹಿಂದೆ ಕಾಂಗ್ರೆಸ್ ಚುನಾವಣೆ ಮಾಡಿದವರು, ಈಗಾ ಬಿಜೆಪಿ ಸೇರ್ಪಡೆ ಆಗ್ತಿದ್ದಾರೆ. ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಫಲಿತಾಂಶದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಟಿಕೆಟ್ ಸಿಕ್ಕಿದ್ದು ಬಹಳ ಸಂತೋಷ, ಅಲ್ಪಸಂಖ್ಯಾತರನ್ನು ಕೆರೆದು ಮಾತಾಡುತ್ತೇವೆ : ಸಮರ್ಥ ಶಾಮನೂರು



















