ಬೆಂಗಳೂರು: ಒತ್ತುವರಿ ತೆರವು ಬಳಿಕ ನಿರಾಶ್ರಿತರಾಗಿ ಉಳಿದ ಕೋಗಿಲು ಪ್ರದೇಶದ ಕುಟುಂಬಗಳಿಗೆ ಸರ್ಕಾರದಿಂದ ಕೊನೆಗೂ ನಿವೇಶನ ಭಾಗ್ಯ ದೊರೆಯುತ್ತಿದೆ. ಇದು ಯುಗಾದಿ ಮತ್ತು ರಂಜಾನ್ ಹಬ್ಬಕ್ಕೆ ಸರ್ಕಾರದಿಂದ ವಿಶೇಷ ಉಡುಗೊರೆ ಕೊಟ್ಟಂತಾಗಿದೆ.
ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಮುಂದಾಗಿದ್ದು, ಸುಮಾರು ಮೂರುರಿಂದ ನಾಲ್ಕು ತಿಂಗಳ ಬಳಿಕ ಇದೀಗ ಹಕ್ಕುಪತ್ರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಇಂದು ವಸತಿ ಸಚಿವ ಜಮೀರ್ ಅಹ್ಮದ್ ಅವರಿಂದ ವಿಕಾಸ ಸೌಧದಲ್ಲಿ ಅರ್ಹರಿಗೆ ನಿವೇಶನ ಪತ್ರ ವಿತರಿಸಲಾಗುತ್ತಿದೆ.
ಮೊದಲ ಹಂತದಲ್ಲಿ ಕೇವಲ 40 ಅರ್ಹ ಕುಟುಂಬಗಳಿಗೆ ಮಾತ್ರ ನಿವೇಶನ ಹಕ್ಕುಪತ್ರ ನೀಡಲಾಗುತ್ತಿದ್ದು, ಬ್ಯಾಟರಾಯನಪುರದಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ ಸಮುಚ್ಚಯದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಈ ಕ್ರಮದಿಂದ ನಿರಾಶ್ರಿತ ಕುಟುಂಬಗಳಿಗೆ ಶಾಶ್ವತ ವಾಸದ ಆಶ್ರಯ ಸಿಗಲಿದ್ದು, ಹಲವು ತಿಂಗಳ ನಿರೀಕ್ಷೆಗೆ ತೆರೆ ಬೀಳಲಿದೆ.
ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಪೆನ್, ಚಾಕಲೇಟ್ ನೀಡಿ ‘ಆಲ್ ದಿ ಬೆಸ್ಟ್’ ಹೇಳಿದ ಶಾಸಕ ಸುರೇಶ್ ಬಾಬು



















