ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇಷ್ಟು ದಿನ ಜನರಿಗೆ ಟೋಪಿ ಹಾಕಿ, ಮಿನಿ ಬಾಂಗ್ಲಾದೇಶವನ್ನು ಮಾಡ್ತಿದೆ. ನಾವೆಲ್ಲರೂ ಇಲ್ಲಿ ಸರ್ವೆ ಮಾಡಿದ್ದೇವೆ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಾವೆಲ್ಲರೂ ಇಲ್ಲಿ ಸರ್ವೆ ಮಾಡಿದ್ದೇವೆ. ನಾವು ಕೂಡ ಇಲ್ಲಿರುವ ನಿವಾಸಿಗರನ್ನು ಮಾತಾಡಿಸಿದ್ದೇವೆ ಅವರು ಹೇಳ್ತಾರೆ 25 ವರ್ಷಗಳಿಂದ ಇಲ್ಲೇ ಇದ್ದೇವೆ ಅಂತಾ ಕೆಲವರನ್ನು ಕೇಳಿದ್ರೆ ಟ್ರಾಕ್ಟರ್ ಓಡಿಸುತ್ತಿದ್ವಿ ಅಂತಾರೆ ಇಲ್ಲಿ ಗುಡ್ಡ ಇದೆ ಇಲ್ಲೇನು ಹೊಲ ಇದೆಯಾ ಉಳುಮೆ ಮಾಡೋಕೆ ಸರ್ಫರಾಜ್ ಖಾನ್ ಅಧಿಕಾರಿಗಳಿಗೆ ಹೇಳಿ ಹೋಗಿದ್ದಾರೆ ಅಂತೆ ಇವರು ಎಲ್ಲರು ಬಂದು ಆರು ತಿಂಗಳು ಕೂಡ ಆಗಿಲ್ಲ ಡಿಕೆ ಶಿವಕುಮಾರ್ ಅವ್ರು ಅಕ್ರಮವಾಗಿ ಮನೆ ಕೆಡುತ್ತೇವೆ ಅಂತಾರೆ. ಇವರು ಎಲ್ಲರು ಅಕ್ರಮ ನಿವಾಸಿಗಳು ಅದು ಹೇಗೆ ಕರೆಂಟ್ ಕೊಟ್ಟರು? ಎಂದು ಆಕ್ರೋಶಿಸಿದ್ದಾರೆ.
ಬಾಂಗ್ಲಾದೇಶದಿಂದ ಬಂದೋರೆಲ್ಲ ಏನು ಸಿದ್ದರಾಮಯ್ಯ ನೆಂಟರಾ
ಇವರು ಎಲ್ಲರು ಬಂದು ಆರು ತಿಂಗಳು ಕೂಡ ಆಗಿಲ್ಲ. ಡಿಕೆ ಶಿವಕುಮಾರ್ ಅವ್ರು ಅಕ್ರಮವಾಗಿ ಮನೆ ಕೆಡುತ್ತೇವೆ ಅಂತಾರೆ. ಇವರು ಎಲ್ಲರು ಅಕ್ರಮ ನಿವಾಸಿಗಳು ಅದು ಹೇಗೆ ಕರೆಂಟ್ ಕೊಟ್ಟರು? ಬಾಂಗ್ಲಾದೇಶದಿಂದ ಬಂದವರೆಲ್ಲ ಇವರು ಏನು ಸಿದ್ದರಾಮಯ್ಯ ನೆಂಟರಾ? ಬೆಂಗಳೂರಿನಲ್ಲಿ ನಿತ್ಯ ಒಂದು ಕಾಲೋನಿ ಗಳು ರೆಡಿ ಆಗ್ತಿವೆ. ಇವರು ಎಲ್ಲರಿಗೂ ಒಬ್ಬ ಊಟ ರೆಡಿ ಮಾಡಿ ಕೊಡ್ತಿದ್ದಾನೆ. ಇವರು ಎಲ್ಲರಿಗೂ ಹುಟ್ಟಿದ ವಿಳಾಸವದೇ ಇಲ್ಲ ಆಧಾರ್ ಕಾರ್ಡ್ ಎಲ್ಲಿಂದೋ, ರೇಷನ್ ಕಾರ್ಡ್ ಮಾತ್ರ ಇಲ್ಲಿಂದ600 ಕೋಟಿ ಬೆಲೆ ಬಾಳುವ ಜಾಗ ಇದು ಹೇಗೆ ಕೊಡುತ್ತಾರೆ? ಉ.ಕ ಭಾಗದಲ್ಲಿ ಪ್ರವಾಹ ಆಗಿ ಇನ್ನೂ ಸಂತ್ರಸ್ತರಿಗೆ ಮನೆ ಸಿಕ್ಕಿಲ್ಲ ಶಾಲೆಗಳು ಕಳೆದುಕೊಂಡು ಪಾಪ ಮರದ ಕೆಳಗೆ ಶಿಕ್ಷಕರು ಪಾಠ ಮಾಡ್ತಿದ್ದಾರೆ. ಇವರ ಯೋಗ್ಯತೆಗೆ ಒಂದು ಶಾಲೆ ಕಟ್ಟಿಕೊಡೋಕೆ ಆಗಿಲ್ಲ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಿಗರಿಗೆ ಚಿಪ್ಪು, ಬಾಂಗ್ಲಾದೇಶದವರಿಗೆ ಕಪ್ಪು
ಸಿದ್ದರಾಮಯ್ಯ ಟೋಪಿ ಹಾಕೊಂಡು ಜನರಿಗೆ ಟೋಪಿ ಹಾಕಿದ್ದಾರೆ. ಒಂದು ಟ್ವಿಟ್ಗೆ ಕೇರಳ ಸರ್ಕಾರಕ್ಕೆ ನಮ್ಮ ಸರ್ಕಾರ ಮಂಡಿಯೂರಿದೆ. ಇಲ್ಲೆ ತೆರವುಗೊಳಿಸಿದರ ಬಗ್ಗೆ ಪಾಕಿಸ್ತಾನಕ್ಕೆ ಹೇಗೆ ಗೊತ್ತಾಯ್ತು?ಅಂದರೆ ಇಲ್ಲಿ ಟೆರರಿಸ್ಟ್ ಇದ್ದಾನೆ, ಪಾಕಿಸ್ತಾನಕ್ಕೆ ಅವ್ನು ಮಾಹಿತಿ ಕೊಟ್ಟಿದ್ದಾನೆ. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ಬುಲ್ಡೊಜರ್ ರಾಜ್ಯ ಅಂದಿದ್ದ ಕೇರಳ ಸಿಎಂ ಜೊತೆ ವೇಧಿಕೆ ಹಂಚಿಕೊಂಡಿದ್ಸೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯಾ? ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಬಾಣ ನಡೆಸಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಜಟಾಪಟಿ | ಕೇರಳ ಸಿಎಂ ಪಿಣರಾಯಿ ಜೊತೆ ಸಿದ್ದರಾಮಯ್ಯ ಆತ್ಮೀಯ ಕುಶಲೋಪರಿ



















