ಲಖನೌ : ಕಾಡು ಹಂದಿಯೊಂದು ಅರಣ್ಯಾಧಿಕಾರಿ ಮೇಲೆ ಭೀಕರವಾಗಿ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಬದೌನ್ನ ಉಜಾನಿ ಪ್ರದೇಶದ ಸಿರ್ಸೌಲಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕಾಡು ಹಂದಿ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮೇಲೆಯೇ ಹಂದಿ ದಾಳಿ ನಡೆಸಿದೆ.
ಅರಣ್ಯ ಅಧಿಕಾರಿ ಶುಭಂ ಪ್ರತಾಪ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇತರೆ ಸಿಬ್ಬಂದಿ ಕಾಡುಹಂದಿಯ ದಾಳಿಯಿಂದ ಅವರನ್ನು ರಕ್ಷಿಸಿ ಹೊರಕ್ಕೆ ಕರೆತಂದಿದ್ದಾರೆ. ಪ್ರಸ್ತುತ ಶುಭಂ ಪ್ರತಾಪ್ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಉನ್ನತ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಿರ್ಸೌಲಿ ಗ್ರಾಮಕ್ಕೆ ನುಗ್ಗಿದ್ದ ಕಾಡುಹಂದಿ ಜನರಿಗೆ ಸಾಕಷ್ಟು ಉಪಟಳ ನೀಡುತ್ತಿತ್ತು. ಹಲವು ಗ್ರಾಮಸ್ಥರ ಮೇಲೆಯೂ ಈ ಹಂದಿ ದಾಳಿ ಮಾಡಿತ್ತು. ಹೀಗಾಗಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಅದರಂತೆ ಗುರುವಾರ ಕಾಡು ಹಂದಿಯ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುವ ವೇಳೆ ಈ ಘಟನೆ ನಡೆದಿದೆ.
ಇದನ್ನೂ ಓದಿ : ಜಪಾನ್ನ ಟೈರ್ ಕಾರ್ಖಾನೆಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ | 14 ಮಂದಿಗೆ ಗಾಯ



















