ಒಡಿಶಾದ ಭುವನೇಶ್ವರದಲ್ಲಿ ದುಡ್ಡಿನ ಮಳೆ ಸುರಿದಿದೆ. ಆಶ್ಚರ್ಯವಾದ್ರು ಇದು ಸತ್ಯ. ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಚೀಫ್ ಇಂಜಿನಿಯರ್ ಆಗಿರೋ ಬೈಕುಂಠ್ ಸಾರಂಗಿ ನಿವಾಸದ ಮೇಲೆ ವಿಚಕ್ಷಣ ದಳದ ಅಧಿಕಾರಿಗಳು ರೇಡ್ ಮಾಡಿದ್ರು. ಈ ವೇಳೆ ತನ್ನ ಅಕ್ರಮ ಸಂಪತ್ತನ್ನು ಅಧಿಕಾರಿಗಳ ಕೈಗೆ ಸಿಗದಂತೆ ತನ್ನ ಪ್ಲ್ಯಾಟ್ ನ ಕಿಟಕಿಯಿಂದ ಗಾಳಿಗೆ ತೂರಿದ್ದಾನೆ.
ಅಧಿಕಾರಿಗಳು ಮನೆ ಬಾಗಿಲು ಬಡಿಯುತ್ತಿದ್ದಂತೆ ಅಲರ್ಟ್ ಆದ ಬೈಕುಂಠ್, 500 ರೂಪಾಯಿ ನೋಟಿನ ಕಂತೆಗಳನ್ನು ಕಿಟಕಿ ಮೂಲಕ ಗಾಳಿಗೆ ತೂರಿದ್ದಾನೆ. ಈ ವೇಳೆ ದಾರಿ ಹೋಕರು ಈ ನೋಟಿನ ಮಳೆ ಕಂಡು ದಂಗಾಗಿದ್ದಾರೆ.
ಸದ್ಯ ಅಧಿಕಾರಿ ಮನೆಯಲ್ಲಿ 2 ಕೋಟಿ ನಗದನ್ನು ಜಪ್ತಿ ಮಾಡಲಾಗಿದೆ. ಅಪಾರ ಪ್ರಮಾಣದ ಆಸ್ತಿ ಪತ್ರಗಳೂ ಪತ್ತೆಯಾಗಿದ್ದು, ಅಧಿಕಾರಿ ವಿಚಾರಣೆ ಮುಂದುವರಿದಿದೆ. ಬೈಕುಂಠ್ ನಿವಾಸದಲ್ಲಿ 500, 200, 100, 50ರ ಮುಖಬೆಲೆಯ ನೋಟಿನ ಕಂತೆಗಳು ಪತ್ತೆಯಾಗಿವೆ.