ರಾಯಚೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಕೆಂಡಾಮಂಡಲವಾಗಿತ್ತು. ಈಗ ಗಡಿಯಲ್ಲಿ ಅದಕ್ಕೆ ಪ್ರತೀಕಾರವಾಗುತ್ತಿದೆ. ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದವರ ರಕ್ತತರ್ಪಣವಾಗುತ್ತಿದೆ.

ಇದೀಗ ಪಾಕಿಸ್ತಾನ ಪ್ರಧಾನಿ ಹಾಗೂ ಪಾಕ್ ದೇಶದ ಬಾವುಟಕ್ಕೆ ಬೆಂಕಿ ಹಚ್ಚಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಿಂದೂ ಮುಸ್ಲಿಂ- ಯುವಕರ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಭಾರತೀಯ ಸೈನಿಕರು ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ಪ್ರಶಂಸಿಸಿದ್ದಾರೆ. ಭಾರತದಲ್ಲಿ ರಾಮ್ ರಹೀಮ್ ರನ್ನು ಬೇರೆ ಮಾಡಲು ಸಾಧ್ಯವೇ ಇಲ್ಲಾ. ದೇಶದಲ್ಲಿ ಕೆಲ ತಾಲಿಬಾನ್ ಮುಖವಾಡ ಹಾಕಿದ ಜನರಿದ್ದಾರೆ. ದೇಶಕ್ಕಾಗಿ ನಾವೆಲ್ಲರೂ ರಕ್ತ ಕೊಡಲು ಸಿದ್ಧ ಎಂದು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು.