ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಅರ್ಥ ಶತಮಾನಗಳೇ ಉರುಳಿ ಹೋಗಿದೆ. ಒಂದಿಡೀ ಪೀಳಿಗೆ ಕನಸಿನಲ್ಲೂ ಇಂಥದ್ದೊಂದು ಕಲ್ಪನೆಯನ್ನು ಮಾಡಿರಲಿಕ್ಕಿಲ್ಲ. ಅಂಥದ್ದೊಂದು ಸಂದರ್ಭ ಬಂದರೆ ಹೇಗೆ ಅನ್ನೋ ಊಹೆ ಕೂಡ ಯಾರೊಬ್ಬರಿಗಿಲ್ಲ. ಕಡೆಗೂ ಆ ಪ್ರತೀಕಾರದ ಗಳಿಗೆ ಹತ್ತಿರವಾದಂತೆ ಕಾಣುತ್ತಿದೆ. ಪಹಲ್ಗಾಮ್ ನಲ್ಲಿ ನರಮೇಧ ನಡೆಸಿದ.
ಅದಕ್ಕೆ ಸಾಥ್ ಕೊಟ್ಟವರ ಸಂಹಾರದ ಪಾಂಚಜನ್ಯ ಮೊಳಗಿಯಾಗಿದೆ. ಇನ್ನೇನಿದ್ದರೂ ಕೇವಲ ಆಕ್ಷನ್ ಮಾತ್ರ ಬಾಕಿ. ಭಾರತ ಹಿಂದೆಂದೂ ಇಡದಂಥಾ ದೊಡ್ಡ ಹೆಜ್ಜೆ ಇಡಲು ಅಣಿಯಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ 54 ವರ್ಷಗಳ ಬಳಿಕ ದೇಶದ 244 ಜಿಲ್ಲೆಗಳಲ್ಲಿ ಅಣಕು ಯುದ್ಧದ ಡ್ರಿಲ್ ನಡೆಸಲಾಗ್ತಿದೆ.
1971ರ ಬಾಂಗ್ಲಾ ವಿಮೋಚನೆ ಬಳಿಕ ಮೊದಲ ಡ್ರಿಲ್
ಅದು 1971…ಬಾಂಗ್ಲಾ ವಿಮೋಚನೆಗಾಗಿ ಭಾರತ ಪಾಕ್ ವಿರುದ್ಧ ಸಮರ ಸಾರಿದ್ದ ಸಮಯ..ಹಿಂದೂಸ್ತಾನ ಅಂದು ಯುದ್ಧಕ್ಕೆ ಸಾಕ್ಷಿಯಾದ ಬಳಿಕ ಮತ್ತೆಂದೂ ದೇಶದಲ್ಲಿ ಅಂಥದ್ದೊಂದು ಸನ್ನಿವೇಶ ಎದುರಾಗಿರ್ಲಿಲ್ಲ. ಆದ್ರೀಗ ಕಾಲ್ಕೆರೆದು ಜಗಳಕ್ಕೆ ನಿಂತ ನಸುಗುನ್ನಿ ಪಾಕಿಗಳ ಅಹಂಕಾರವನ್ನು ಚೆಂಡಾಡಬೇಕಿದೆ. ಇದಕ್ಕಾಗಿಯೇ ಪೂರ್ವ ತಯಾರಿ ಎನ್ನುವಂತೆ ಇಂದಿನ ಪೀಳಿಗೆಗೆ ಯುದ್ಧದ ವಾತಾವರಣದ ಅಣುಕು ಸೃಷ್ಟಿಸೋ ಮೂಲಕ ಭವಿಷ್ಯದ ಪರಿಸ್ಥಿತಿ ನಿಭಾಯಿಸುವ ಪಾಠ ಮಾಡಲಾಗ್ತಿದೆ.
ಯುದ್ಧದ ಡ್ರಿಲ್ ನಲ್ಲಿ ಏನೆಲ್ಲಾ ನಡೆಯುತ್ತೆ?
ಯುದ್ಧದ ಡ್ರಿಲ್ ನ ಅಂಗವಾಗಿ ದೇಶದ 244 ಜಿಲ್ಲೆಗಳ ಜನರಿಗೆ ಕೆಲ ಸುರಕ್ಷಿತ ಪಾಠದ ಪ್ರಯೋಗಿಕ ತರಬೇತಿ ನೀಡಲಾಗುತ್ತೆ. ಅದರಲ್ಲಿ ಪ್ರಮುಖವಾಗಿ ಶತ್ರುಗಳ ವಾಯುದಾಳಿಯಾದಾಗ ಪಾರಾಗಲು ಮುನ್ಸೂಚನೆ ಎನ್ನುವಂತೆ ಸೈರನ್ ಮೊಳಗಲಿದೆ. ಎರಡನೆಯದಾಗಿ ಬಾಂಬ್ ದಾಳಿ ಆರಂಭವಾದ್ರೆ ಬಚಾವ್ ಆಗಲು ಯುದ್ಧದ ವೇಳೆ ರಕ್ಷಣೆಯ ತರಬೇತಿ ನೀಡಲಾಗುತ್ತೆ. ಮೂರನೆಯದಾಗಿ ರಾತ್ರಿ ಹೊತ್ತಲ್ಲಿ ಎದುರಾಳಿಗಳು ದಾಳಿಗೆ ಮುಂದಾದ್ರೆ ಆ ಪ್ರದೇಶದ ನಗರ, ಪಟ್ಟಣಗಳ ಸುಳಿವು ಸಿಗದಂತೆ ವಿದ್ಯುತ್ ಸಂಪರ್ಕವನ್ನೇ ಸಂಪೂರ್ಣ ಸ್ಥಗಿತಗೊಳಿಸುವಿಕೆ.
ಈ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದನ್ನು ಹೇಳಿಕೊಡಲಾಗ್ತಿದೆ. ನಾಲ್ಕನೆಯದಾಗಿ ದೇಶದ ಪ್ರಮುಖ ವಿದ್ಯುತ್, ಥರ್ಮಲ್,ಸೋಲಾರ್ ಸ್ಥಾವರಗಳನ್ನು ಶತ್ರುಗಳಿಂದ ಮರೆಮಾಚುವ ಪ್ರಕ್ರಿಯೆ ನಡೆಸಲಿದೆ. ಅಂತಿಮವಾಗಿ ತುರ್ತು ಸಂದರ್ಭ ಎದುರಾದ್ರೆ ಶತ್ರುಗಳ ಕಣ್ತಪ್ಪಿಸಿ ಹೇಗೆ ಜನರನ್ನು ಸ್ಥಳಾಂತರಿಸಬೇಕು ಅನ್ನೋದರ ಬಗ್ಗೆ ಯುವಕರು, ಸ್ಥಳೀಯರಿಗೆ ತರಬೇತಿ ನೀಡಲಾಗುತ್ತಿದೆ.
ಯಾವೆಲ್ಲಾ ರಾಜ್ಯಗಳಲ್ಲಿ ನಡೆಯಲಿದೆ ಡ್ರಿಲ್?
ಮೇ 7 ಅಂದ್ರೆ ಬುಧವಾರ ದೇಶದ ಆಯ್ದ 244 ಜಿಲ್ಲೆಗಳಲ್ಲಿ ಈ ಯುದ್ಧ ಡ್ರಿಲ್ ನಡೆಯಲಿದೆ. ಅದ್ರಲ್ಲೂ ಪಾಕಿಸ್ತಾನ ಗಡಿಗೆ ಅಂಟಿಕೊಂಡಂತಿರುವ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ, ಮತ್ತು ಗುಜರಾತ್ ನ 244 ಜಿಲ್ಲೆಗಳಲ್ಲಿ ಈ ಅಣಕು ಡ್ರಿಲ್ ನಡೆಸುವಂತೆ ಅಲ್ಲಿನ ಆಡಳಿತಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಂತಾ ಈ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ಯಾವ ರಾಜ್ಯವನ್ನೂ ಹೆಸರಿಸಲಾಗಿಲ್ಲ. ಈ ಬೆಳವಣಿಗೆ ನೋಡಿದ್ರೆ, ಯುದ್ಧದ ಕಾರ್ಮೋಡ ಆವರಿಸಿದ್ದು, ಅದು ಪ್ರತೀಕಾರದ ಮಳೆಯಾಗಿ ಸುರಿಯಬೇಕಿದೆ ಅಷ್ಟೇ.
1971ರ ಬಳಿಕ ಭಾರತ ಯುದ್ಧಕ್ಕೆ ಸಾಕ್ಷಿಯಾಗಿಲ್ಲ. ಅರ್ಧ ಶತಮಾನದ ಬಳಿಕ ದೇಶವಾಸಿಗಳನ್ನ ಸಮರಕ್ಕೆ ಸಜ್ಜುಗೊಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿಯೇ ದೇಶದ 244 ಜಿಲ್ಲೆಗಳಲ್ಲಿ ನಾಳೆ ಅಣಕು ಯುದ್ಧ ನಡೆಸಿ ತರಬೇತಿ ನೀಡಲಾಗುತ್ತಿದೆ.


















