ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಇಒಗೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ ಸು಼ಧಾಕರ್ ತರಾಟೆ ತೆಗೆದುಕೊಂಡಿದ್ದಾರೆ.
ಕಟ್ಟಡಕ್ಕೆ ಪ್ಲಾಸ್ಟಿಂಗ್ ಸರಿಯಾಗಿ ಇಲ್ಲದ ಕಾರಣ ಶಾಸಕ ಬಿ .ಎನ್ ರವಿಕುಮಾರ್ ಎದುರೇ ಅಧಿಕಾರಿ ವಿರುದ್ಧ ಸುಧಾಕರ್ ಗರಂ ಆಗಿದ್ದಾರೆ. ಈ ವೇಳೆ ಸಚಿವರ ಪ್ರಶ್ನೆಗೆ ಉತ್ತರಿಲು ಹೇಮಾವತಿ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರ್ವಾಣಾಧಿಕಾರಿ ತಡಬಡಾಯಿಸಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ಘಟನೆ ನಡೆದಿದೆ.