ನವದೆಹಲಿ: ಯಾವೊಬ್ಬ ಪಾಕಿಸ್ತಾನಿಯೂ ಭಾರತದಲ್ಲಿ ವಾಸ್ತವ್ಯ ಮುಂದುವರಿಸದಂತೆ ನೋಡಿಕೊಳ್ಳಿಿ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚಿಸಿದ್ದಾರೆ.
ಶುಕ್ರವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅಮಿತ್ ಶಾ ಅವರು, ಪಾಕಿಸ್ತಾನೀಯರಿಗೆ ಭಾರತ ಬಿಟ್ಟು ತೊಲಗಲು ನಾವು ಈಗಾಗಲೇ ಗಡುವು ನೀಡಿದ್ದೇವೆ. ಆ ಗಡುವು ಮುಗಿಯುವುದರೊಳಗಾಗಿ ಅವರು ದೇಶ ಬಿಟ್ಟು ತೆರಳಬೇಕು. ಯಾವೊಬ್ಬ ಪಾಕಿಸ್ತಾನಿ ಪ್ರಜೆಯೂ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾಾರೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಬುಧವಾರ ಉನ್ನತ ಮಟ್ಟದ ಸಭೆಯ ಬಳಿಕ ಭಾರತ ಸರ್ಕಾರವು, ಪಾಕಿಸ್ತಾನಿ ಪ್ರಜೆಗಳಿಗೆ ವಿತರಿಸಲಾದ ಎಲ್ಲ ವೀಸಾಗಳನ್ನು ಏಪ್ರಿಲ್ 27ರಿಂದ ಸ್ಥಗಿತಗೊಳಿಸುವಂತೆ ಸೂಚಿಸಿತ್ತು.
ಭಾರತದಲ್ಲಿರುವ ಎಲ್ಲ ಪಾಕಿಸ್ತಾನೀಯರೂ ತಮ್ಮ ದೇಶಕ್ಕೆೆ ವಾಪಸ್ ಹೋಗುವಂತೆಯೂ ಖಡಕ್ ಸೂಚನೆ ನೀಡಿತ್ತು. ಅದೇ ರೀತಿ ಪಾಕಿಸ್ತಾನದಲ್ಲಿರುವ ಭಾರತೀಯರಿಗೂ ಆದಷ್ಟು ಬೇಗ ಸ್ವದೇಶಕ್ಕೆೆ ಮರಳುವಂತೆ ಸಲಹೆ ನೀಡಲಾಗಿತ್ತು.
ಶುಕ್ರವಾರ ಗೃಹ ಸಚಿವ ಅಮಿತ್ ಶಾ ಅವರು ವೈಯಕ್ತಿಕವಾಗಿ ಪ್ರತಿಯೊಬ್ಬ ಮುಖ್ಯಮಂತ್ರಿಯೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ನಾವು ನೀಡಿರುವ ಗಡುವು ಮೀರಿ ಯಾವೊಬ್ಬ ಪಾಕಿಸ್ತಾನಿಯೂ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.