ಕೊಪ್ಪಳ : ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಹಾಗೂ ಧಾರ್ಮಿಕ ತಾಣ, ಆಂಜನೇಯನ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ದಂಪತಿ ಸಮೇತ ಭೇಟಿ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪತ್ನಿಯೊಂದಿಗೆ 575 ಮೆಟ್ಟಿಲು ಹತ್ತಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿರುವ ದ್ರಾವಿಡ್ ಅವರು, ಕೆಲ ಹೊತ್ತು ಅಂಜನಾದ್ರಿ ಬೆಟ್ಟದಲ್ಲೇ ಕಳದಿದ್ದಾರೆ. ಸುತ್ತ ಇರುವ ಕಲ್ಲುಬಂಡೆಗಳ ಬೆಟ್ಟ ಗುಡ್ಡವನ್ನು, ಹಂಪಿ ಸೇರಿದಂತೆ ವಿಶಾಲ ಐತಿಹಾಸಿಕ ತಾಣವನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ : ‘ಜೂನಿಯರ್ ವಾಲ್’ ಅಲ್ಲ.. ತನ್ನದೇ ಛಾಪು ಮೂಡಿಸಿದ ಸಮಿತ್ ದ್ರಾವಿಡ್!



















