ಬೆಂಗಳೂರು : ಕಾವೇರಿ ನೀರಿನ ಹಂಚಿಕೆ ವಿವಾದ ಹೊಸದೇನಲ್ಲ. ಕರ್ನಾಟಕ–ತಮಿಳುನಾಡು ನಡುವಿನ ಈ ವಿವಾದ ಹಲವು ಬಾರಿ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಇದೀಗ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಕ್ಕೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು, ರಾಜಕೀಯ ನಾಯಕರು, ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಧುಮುಕಿವೆ.
ಇದೇ ಹೋರಾಟದ ಇತಿಹಾಸದಲ್ಲಿ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ನಡೆಸಿದ ಉಪವಾಸ ಸತ್ಯಾಗ್ರಹ ಪ್ರಮುಖ ಘಟ್ಟವಾಗಿ ದಾಖಲಾಗಿದೆ. ಇತ್ತ ಕರ್ನಾಟಕದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಿರಂತರ ಹೋರಾಟಗಳ ಮೂಲಕ ಕಾವೇರಿ ವಿಚಾರವನ್ನು ಜೀವಂತವಾಗಿಟ್ಟ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಹೌದು.. 1993ರ ಜುಲೈನಲ್ಲಿ ಕರ್ನಾಟಕವು ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ, ಚೆನ್ನೈನ ಎಂಜಿಆರ್ ಸ್ಮಾರಕದ ಬಳಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದರು. ತಮಿಳುನಾಡಿನ ರೈತರಿಗೆ ನೀರು ಒದಗಿಸಬೇಕು ಹಾಗೂ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ಜಾರಿಯಾಗಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಈ ಉಪವಾಸ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಭಾರೀ ಸದ್ದು ಮಾಡಿತ್ತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಗಂಭೀರ ವಿಚಾರಗಳು ಪ್ರಸ್ತಾಪ ಆಗಿದ್ದವು. ಕಾವೇರಿಗಾಗಿ ಜಯಲಲಿತಾ ಉಪವಾಸ ಸತ್ಯಾಗ್ರಹ ಹಾಗೂ ಈ ಹಿನ್ನೆಲೆ ಮಾತುಕತೆ ನಡೆಸಲು ರಾತ್ರೋ ರಾತ್ರಿ ಕರ್ನಾಟಕಕ್ಕೆ ಕೇಂದ್ರ ಸಚಿವ ವಿ.ಸಿ.ಶುಕ್ಲಾ ಅವರು ಆಗಮಿಸಿದ್ದ ಬಗ್ಗೆ ಚರ್ಚೆ ನಡೆದಿತ್ತು. ಅಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವಾಟಾಳ್ ನಾಗರಾಜ್ ಅವರು ಭಾವಾವೇಶದಿಂದ ಮಾತನಾಡಿದ್ದರು.
ಈ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಸರ್ಕಾರ ಕಾವೇರಿ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾರೆಂದು ಗುಡುಗಿದ್ದರು.
ಜಯಲಲಿತಾ ಸತ್ಯಾಗ್ರಹ ಅಂತ್ಯಕ್ಕೆ ಹೇಗೆ ನಡೆದಿತ್ತು ಕಸರತ್ತು?
ಜಯಲಲಿತಾರವರ ಸತ್ಯಾಗ್ರಹವನ್ನು ಅಂತ್ಯ ಮಾಡುವುದಕ್ಕೆ ರಾತ್ರೋರಾತ್ರಿ ವಿಶೇಷ ವಿಮಾನದಲ್ಲಿ ಕೇಂದ್ರದ ಮಂತ್ರಿಗಳಾದ ವಿ.ಸಿ.ಶುಕ್ಲಾರವರು ಆಗಮಿಸಿದ್ದರು. ಅವರನ್ನು ಒಂದು ಗಂಟೆ ರಾತ್ರಿಯಲ್ಲಿ ನಮ್ಮ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವ ಸಂಪುಟದ ಅನೇಕ ಮಂತ್ರಿಗಳು ವಿಮಾನ ನಿಲ್ದಾಣದಿಂದ ರಾತ್ರೋರಾತ್ರಿ ಕರೆದು ಕೊಂಡು ಬಂದು ಎರಡು ಗಂಟೆ ರಾತ್ರಿಯಲ್ಲಿ ಔತಣ ವ್ಯವಸ್ಥೆ ಎಲ್ಲವನ್ನೂ ಮಾಡಿದರು ಎಂದು ವಾಟಾಳ್ ಆರೋಪಿಸಿದ್ದರು.
ಆ ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಕರ್ನಾಟಕ ರಾಜ್ಯದಲ್ಲಿ ನಡೆದ ಪಿತೂರಿ ಏನು? ಪ್ರಧಾನ ಮಂತ್ರಿಯವರ ಆದೇಶದ ಮೇಲೆ ಇಲ್ಲಿಗೆ ಯಾವ ವಿ.ಸಿ. ಶುಕ್ಲಾರವರು ಬಂದಿದ್ದರು. ಆ ವಿ.ಸಿ.ಶುಕ್ಲಾರವರಿಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೂ ನಡೆದಂಥ ಮಾತುಗಳೇನು, ಕರಾರುಗಳೇನು, ಗೋಪ್ಯ ಕರಾರುಗಳೇನು, ಇದರ ಬಗ್ಗೆ ತಿಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಈ ಒಂದು ಸಭೆಯ ಮುಖಾಂತರ ಒತ್ತಾಯ ಮಾಡುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದರು.
ಆ ಒಂದು ಕಾಗದ ಪತ್ರಗಳನ್ನು ಸಭೆಯ ಮುಂದೆ ಮಂಡಿಸಬೇಕು. ಅದು ಅತಿಮುಖ್ಯ. ಇವರಿಗೂ ಶುಕ್ಲಾರವರಿಗೂ ನಡೆದಿರತಕ್ಕಂಥ ಪತ್ರ ವ್ಯವಹಾರ ಮತ್ತು ಇವರಿಗೂ ಶುಕ್ಲಾರವರಿಗೂ ನಡೆದಿರತಕ್ಕಂಥ ಮಾತಿನ ವ್ಯವಹಾರ, ಇವರು ಅವರು ಬಹಳ ಗೋಪ್ಯವಾಗಿ ಮಾತನಾಡಿರತಕ್ಕಂಥದ್ದು ಏನು ಇದೆ, ಅದು ಬಹಳ ಅತಿಮುಖ್ಯ. ಈ ಅತಿಮುಖ್ಯವಾದಂಥ ಕಾಗದ ಪತ್ರಗಳು ಈ ಸದನಕ್ಕೆ ಬಹಳ ಅಮೂಲ್ಯವಾದದ್ದು. ಈ ಸದನದ ವಸ್ತುವಾಗಿ ಅದು ಬರಬೇಕು ಎಂದು ಗಮನ ಸೆಳೆದಿದ್ದರು.
ಸದನದ ಮುಂದೆ ಪತ್ರ ಮಂಡಿಸಲು ಆಗ್ರಹಿಸಿದ್ದ ವಾಟಾಳ್
ಸದನದ ಮುಂದೆ ಅದನ್ನು ಮುಖ್ಯಮಂತ್ರಿಗಳು ಮಂಡಿಸಬೇಕು. ಜೊತೆಗೆ ಪ್ರಧಾನ ಮಂತ್ರಿಗಳಿಗೆ ಇವರು ಬರೆದಿರತಕ್ಕಂಥ ಪತ್ರಗಳೇನು, ಇವರು ಅವರು ಗೋಪ್ಯವಾಗಿ ಮಾಡಿರತಕ್ಕಂಥ ವಿಚಾರಗಳೇನು, ಇವೆಲ್ಲವೂ ಈ ಸದನದ ಮುಂದೆ ಬರಬೇಕು. ಇಲ್ಲಿಂದ ತಮಿಳುನಾಡಿಗೆ ಹೋದಂಥ ವಿ.ಸಿ. ಶುಕ್ಲಾರವರು ಅವರ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ, ಈ ಬೇಡಿಕೆಗೆ ಕರ್ನಾಟಕದ ಮುಖ್ಯಮಂತ್ರಿಯವರಾದ ವೀರಪ್ಪ ಮೊಯಿಲಿಯವರು ಒಪ್ಪಿದ್ದಾರೆಂದು ಹೇಳಿ ಅವರನ್ನು ಸತ್ಯಾಗ್ರಹದಿಂದ ಏಳಿಸಿದರು ಎಂದು ಆಕ್ರೋಶ ಹೊರಹಾಕಿದ್ದರು.
ಇವರು ಒಪ್ಪಂದ ಮಾಡಿಕೊಂಡಿರುವ ವಿಚಾರಗಳು ಏನು? ಯಾವ ಒಪ್ಪಂದವಾಯಿತು? ಏತಕ್ಕೆಂದರೆ ಅವರು ಅಷ್ಟು ಸುಲಭವಾಗಿ ಸತ್ಯಾಗ್ರಹವನ್ನು ಬಿಡತಕ್ಕಂಥವರಲ್ಲ. ಆದರೂ ಸತ್ಯಾಗ್ರಹವನ್ನು ಬಿಡಬೇಕಾದರೆ ಒಂದು ಒಪ್ಪಂದ ಆಗಿರಲೇಬೇಕು. ಅದು ಏನು ಒಪ್ಪಂದ ? ನಿಮಗೂ ಅವರಿಗೂ ನಡೆದಿರತಕ್ಕಂಥ ಕರಾರು ಏನು? ಅದರ ವಿಚಾರವೇನು ಎನ್ನುವುದನ್ನು ಬಹಿರಂಗಪಡಿಸಬೇಕು ಎನ್ನತಕ್ಕಂಥದ್ದು ಒಂದು ಪ್ರಮುಖವಾದಂಥ ವಿಚಾರ ಎಂದು ಉಲ್ಲೇಖಿಸಿದ್ದರು.
ರಾಷ್ಟ್ರಪತಿಗಳಾಗಿ ಒಂದು ‘ರಾಜ್ಯದ ಪಕ್ಷಪಾತಿಗಳಾಗಿ ನಡೆದುಕೊಂಡಿದ್ದಾರೆ. ಅವರ ಪ್ರೇರಣೆಯಿಂದ, ಪ್ರಭಾವದಿಂದ, ಒತ್ತಾಯದಿಂದ ನ್ಯಾಯ ಮಂಡಲಿ ರಚನೆಯಾಗಿ ನಮಗೆ ಆಗಿರತಕ್ಕ ಅನ್ಯಾಯ ಎಷ್ಟು ಎಂಬುದಕ್ಕೆ ಪುಷ್ಠಿಕರಣ ಕೊಡುತ್ತಿದ್ದೇನೆ. ಈ ರೀತಿ ಪುಷ್ಠಿಕರಣ ಕೊಡುವುದಕ್ಕೆ ಆಧಾರಗಳು ಏನು ಎಂದು ಕೇಳುವುದಾದರೆ, ಅದಕ್ಕೆ ಆಧಾರ ಪ್ರತಿ ಹೆಜ್ಜೆಗೂ ತಮಿಳ್ಳಾಡಿನ ಎಲ್ಲರನ್ನೂ ಅವರು ಸಂತೈಸಿದರು.
ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರುಗಳನ್ನು ಭೇಟಿಯಾದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿದರು. ಕಾವೇರಿ ಸಂಬಂಧದಲ್ಲಿ ಅದು ಕಾವೇರಿಯ ವಿರುದ್ಧದ ಪಿತೂರಿಯ ಕೂಪವಾಗಿತ್ತು ಎಂದು ನಾನು ಹೇಳುತ್ತೇನೆ. ಅದು ವೆಂಕಟರಾಮನ್ ಅವರ ಕಾಲದಲ್ಲಿ ನಡೆದದ್ದು. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಈ ಸಂಬಂಧದಲ್ಲಿ ಒಂದು ಸಮಗ್ರ ತನಿಖೆಯನ್ನು ಕಾವೇರಿ ಪಕ್ಷಪಾತಿಗಳಾಗಿ ನಡೆದುಕೊಂಡಿದ್ದಾರೆ. ಅವರ ಪ್ರೇರಣೆಯಿಂದ, ಪ್ರಭಾವದಿಂದ, ಒತ್ತಾಯದಿಂದ ನ್ಯಾಯ ಮಂಡಲಿ ರಚನೆಯಾಗಿ ನಮಗೆ ಆಗಿರತಕ್ಕ ಅನ್ಯಾಯ ಎಷ್ಟು ಎಂಬುದಕ್ಕೆ ಪುಷ್ಠಿಕರಣ ಕೊಡುತ್ತಿದ್ದೇನೆ.
ಈ ರೀತಿ ಪುಷ್ಠಿಕರಣ ಕೊಡುವುದಕ್ಕೆ ಆಧಾರಗಳು ಏನು ಎಂದು ಕೇಳುವುದಾದರೆ, ಅದಕ್ಕೆ ಆಧಾರ ಪ್ರತಿ ಹೆಜ್ಜೆಗೂ ತಮಿಳ್ಳಾಡಿನ ಎಲ್ಲರನ್ನೂ ಅವರು ಸಂತೈಸಿದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರುಗಳನ್ನು ಭೇಟಿಯಾದರು. ತಮಿಳ್ಳಾಡಿನ ಎಲ್ಲಾ ಪಕ್ಷದ ಮುಖಂಡರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿದರು.
ಕಾವೇರಿ ಸಂಬಂಧದಲ್ಲಿ ಅದು ಕಾವೇರಿಯ ವಿರುದ್ಧದ ಪಿತೂರಿಯ ಕೂಪವಾಗಿತ್ತು ಎಂದು ನಾನು ಹೇಳುತ್ತೇನೆ. ಅದು ಶ್ರೀ ವೆಂಕಟರಾಮನ್ ಅವರ ಕಾಲದಲ್ಲಿ ನಡೆದದ್ದು. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಈ ಸಂಬಂಧದಲ್ಲಿ ಒಂದು ಸಮಗ್ರ ತನಿಖೆಯನ್ನು ಕಾವೇರಿ ಸಂಬಂಧದಲ್ಲಿ ನಡೆದ ವ್ಯವಹಾರಗಳ ಬಗ್ಗೆ ನಡೆಸುವುದಕ್ಕೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ನೇಮಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಮಾಡುತ್ತಿದ್ದೇನೆ ಎಂದಿದ್ದರು ವಾಟಾಳ್.
ಇದನ್ನೂ ಓದಿ : ‘ಘಜನಿ’ ಖ್ಯಾತಿಯ ಖಳನಟ ಪ್ರದೀಪ್ ರಾವತ್ ವಿಧಿವಶ!



















