ಬೆಂಗಳೂರು : ಕೊಲೆಯಾದವನ ಬರ್ತ್ಡೇ ದಿನವೇ ಹಂತಕರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವ ಅಪರೂಪದ ಪ್ರಸಂಗ ಬೆಂಗಳೂರಲ್ಲಿ ನಡೆದಿದೆ. 2018 ಜೂನ್ನಲ್ಲಿ ನಡೆದಿದ್ದ ಪಾಟ್ನಾ ಮೂಲದ ಸಿದ್ಧಾರ್ಥ ಕೊಲೆ ಪ್ರಕರಣ ಸಂಬಂಧ ಮಹತ್ವದ ತೀರ್ಪು ನೀಡಿರುವ ಬೆಂಗಳೂರಿನ ಸಿಸಿಹೆಚ್ 59ನೇ ನ್ಯಾಯಾಲಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 10 ಸಾವಿರ ರೂ.ಗಳನ್ನ ಮೃತನ ತಂದೆಗೆ ಪಾವತಿಸಲು ನ್ಯಾಯಾಲಯ ಸೂಚಿಸಿದೆ.
2018ರ ಜೂನ್ 26ರಂದು, ಸಿದ್ಧಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.45ರ ಸುಮಾರಿಗೆ, ಮೂತ್ರ ವಿಸರ್ಜನೆ ಮಾಡಲು ಕಾರು ನಿಲ್ಲಿಸಿದಾಗ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ಉದ್ದೇಶಪೂರ್ವಕವಾಗಿ ಬೈಕ್ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಇದನ್ನೂ ಓದಿ : ಧರ್ಮಸ್ಥಳ ‘ಅಸಲಿ ನಾಪತ್ತೆ’ ಕೇಸ್ ‘ಗ್ರಹಿಸಿ’ ತನಿಖೆಗೆ ಆಗ್ರಹಿಸಿದ ಮಹಿಳಾ ಆಯೋಗ!
ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಆರೋಪಿಗಳು ಸಿದ್ದಾರ್ಥ್ಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸಿದ್ದಾರ್ಥ್ ಜೂನ್ 28, 2018 ರಂದು ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳಾದ ಗಿರೀಶ್ ಮತ್ತು ಮಹೇಶ್ ಎಂಬವರನ್ನ ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕೊಲೆಯಾಗಿರುವ ಸಿದ್ಧಾರ್ಥ್ ಜನ್ಮದಿನವಾದ ಅಕ್ಟೋಬರ್ 24ರಂದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ : ಹೆಚ್.ವೈ.ಮೇಟಿ ನಿಧನ | ನಾಳೆ ಬಾಗಲಕೋಟೆಯಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ; ಸಿಎಂ ಸಂತಾಪ



















