ಬೆಂಗಳೂರು: ಕೇಂದ್ರ ಸರ್ಕಾರದ ಸ್ವಯಂ ಜನಗಣತಿ ಅಭಿಯಾನಕ್ಕೆ ಬೆಂಗಳೂರು ನಗರದ ನಾಗರಿಕರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗದೆ ಆತಂಕ ವ್ಯಕ್ತವಾಗಿದೆ.
ನಗರದಲ್ಲಿ ಇದುವರೆಗೆ ಕೇವಲ 0.93% ಜನರು ಮಾತ್ರ ಸ್ವಯಂ ಗಣತಿ ಪೂರ್ಣಗೊಳಿಸಿದ್ದಾರೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಒಟ್ಟಾರೆ 32,907 ಜನರು ಮಾತ್ರ ಭಾಗವಹಿಸಿರುವುದು ಗಮನಾರ್ಹವಾಗಿದೆ.
ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ಪಾಲಿಕೆಗಳಲ್ಲಿ ಕಡಿಮೆ ಪಾಲ್ಗೊಳ್ಳುವಿಕೆ. ಜಾಗೃತಿ ಅಭಿಯಾನಗಳು ನಡೆದಿದ್ದರೂ ಕೂಡ ಸ್ಪಂದನೆ ಕಡಿಮೆಯಾಗಿದೆ. ಮನೆಮನೆಗೆ ಭೇಟಿ ಮತ್ತು ಸೋಷಿಯಲ್ ಮೀಡಿಯಾ ಪ್ರಚಾರವೂ ಪರಿಣಾಮಕಾರಿಯಾಗಿಲ್ಲ ಎನ್ನಲಾಗಿದೆ. ಇನ್ನು ಕೆಲವು ಕಡೆತಾಂತ್ರಿಕ ಸಮಸ್ಯೆಗಳು ಹಾಗೂ ಆಪ್ ಬಳಕೆ ಕಷ್ಟ ಎಂಬ ದೂರುಗಳು ಬಂದಿವೆ.
ಡೇಟಾ ಗೌಪ್ಯತೆ ಬಗ್ಗೆ ನಾಗರಿಕರಲ್ಲಿ ಆತಂಕ ವ್ಯಕ್ತವಾಗಿದ್ದು, ಸ್ವಯಂ ಗಣತಿ ಸ್ಪಂದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ಆಯುಕ್ತರು ಕನಿಷ್ಠ ಇನ್ನೊಂದು ತಿಂಗಳು ಅವಧಿ ವಿಸ್ತರಣೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಮುಂದಿನ ಕ್ರಮಗಳು:
ಐಟಿ ಕಂಪನಿಗಳು ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಜಾಗೃತಿ ಹೆಚ್ಚಿಸುವ ಯೋಜನೆ
ಸ್ವಯಂ ಜನಗಣತಿ
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರುನಲ್ಲಿ ಪ್ರತಿಕ್ರಿಯೆ ಬಹಳ ಕಡಿಮೆ.
ಬಳ್ಳಾರಿ – 11.84%
ಬಾಗಲಕೋಟೆ – 10.98%
ದಕ್ಷಿಣ ಕನ್ನಡ – 10.13%
ಸ್ವಯಂ ಜನಗಣತಿ ಕುರಿತು ಜಾಗೃತಿ ಇದ್ದರೂ ಪಾಲ್ಗೊಳ್ಳುವಿಕೆ ಕಡಿಮೆ ಇರುವುದರಿಂದ, ಮುಂದಿನ ದಿನಗಳಲ್ಲಿ ಆಡಳಿತಾತ್ಮಕ ಒತ್ತಡ ಹೆಚ್ಚುವ ಸಾಧ್ಯತೆ ಇದೆ.
ಇದನ್ನೂ ಓದಿ: ಜಿಬಿಎ ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ – ಸರ್ಕಾರಕ್ಕೆ ಪತ್ರ ಬರೆಯಲು ಆಯುಕ್ತರ ಚಿಂತನೆ



















