ರಾಮ ಮಂದಿರದ ಕನಸು ನನಸಾದ ಕಾಲಕ್ಕೆ ಅಡ್ವಾಣಿಯವರಿಗೆ ಭಾರತರತ್ನ ಸಂದಿದೆ. ಅಡ್ವಾಣಿಯವರ ಪಾಲಿಗೆ ಇದು ಅಮೃತಕಾಲ. ತೊಂಬತ್ತಾರು ವರ್ಷದ ಹಿರಿಯ ಜೀವಕ್ಕೆ ಡಬ್ಬಲ್ ಧಮಾಕ ಸಿಕ್ಕ ಪರ್ವಕಾಲ. ಭಾರತೀಯ ಜನತ ಪಾರ್ಟಿಯ ಈ ಹಿರಿಯ ಜೀವಕ್ಕೆ ನಿಜಕ್ಕೂ ಸಿಗಲೇಬೇಕಾದ ಗೌರವ ಕೊನೆಗೂ ಸಿಕ್ಕಂತಾಗಿದೆ.
“ಜೀವನದುದ್ದಕ್ಕೂ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ತಮ್ಮ ಆದರ್ಶ ಮತ್ತು ತತ್ವಗಳಿಗೆ ಸಂದ ಗೌರವ” ಎಂದು ಸ್ವತ: ಭಾರತರತ್ನ ಪುರಸ್ಕೃತ ಲಾಲ್ ಕೃಷ್ಣ ಅಡ್ವಾಣಿಯವರು ಹೇಳಿಕೊಂಡಿದ್ದಾರೆ. “ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ, ಈ ದೇಶದ ಅತ್ಯನ್ನತ ನಾಗರೀಕ ಪ್ರಶಸ್ತಿಯಾದ “ಭಾರತ ರತ್ನ”ವನ್ನು ನಾನು ಸ್ವೀಕರಿಸುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಅಡ್ವಾಣಿಯವರು, ತಮ್ಮ 14 ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್)ನ ಸದಸ್ಯರಾಗಿ ಸಿದ್ಧಾಂತದ ಜೊತೆಯಾದವರು. ಈ ಹಿಂದೆ ಬಿಜೆಪಿ ಕೇಂದ್ರದಲ್ಲಿ ಆಧಿಕಾರ ಪಡೆದಾಗ ಅಟಲ್ ಬಿಹಾರಿ ವಾಜಪೇಯಿ ಜೊತೆ ಪ್ರಧಾನಿ ಹುದ್ದೆಗೇರುವವರ ಪಟ್ಟಿಯಲ್ಲಿ, ಅಡ್ವಾಣಿಯವರೂ ಸಹ ರೇಸಲ್ಲಿದ್ದವರು. ಅಂದು ಅವಕಾಶ ವಂಚಿತರಾಗಿದ್ದರು. ಅಲ್ಲಿಂದ ಈಗಿನ ನರೇಂದ್ರ ಮೋದಿ ಪ್ರಧಾನಿಯಾಗುವ ಟೈಮಲ್ಲೂ ಕೂಡ ಮತ್ತೆ ಅಡ್ವಾಣಿ ಮೂಲೆಗುಂಪಾಗಿದ್ದರು. ಒಟ್ಟಿನಲ್ಲಿ ಎಲ್ಲವೂ ಇದ್ದೂ , ಏನು ಇಲ್ಲದಂತೆ ರಾಜಕೀಯ ಬದಕು ದಾಟಿ ಬಂದ ಅಡ್ವಾಣಿಗೆ, ಇದೊಂದು ಅಮೃತ ಘಳಿಗೆಯೇ ಸರಿ. ಅಧಿಕಾರ ತಪ್ಪಿದರೂ, ಆನಂದದಿಂದಲೇ ಬದುಕು ಸೆವೆಸಿದ, ಮತ್ತು ಎಂದಿಗೂ ತಮ್ಮ ಸಿದ್ಧಾಂತ ಬಿಡದ ಇವರು, ಅಂದಿನ ಜನಸಂಘದಿಂದ, ಇಂದಿನ ಭಾರತೀಯ ಜನತಾ ಪಾರ್ಟಿಯವರೆಗೂ ಪಕ್ಷದ ಪಳನಿಷ್ಟಾವಂಯ ಸೇವಕನಾಗಿಯೇ ಉಳಿದುಹೋದವರು. ಇಂಥ ಮಹಾನ್ ಚೇತನಕ್ಕೆ, ತನ್ನಾಸೆಯ ರಾಮ ಮಂದಿರ ಉದ್ಘಾಟನೆಗೊಂಡ ಶುಭ ಸಂದರ್ಭದಲ್ಲಿಯೇ ಅತ್ಯುನ್ನತ ಗೌರವಕ್ಕೆ ಮನ್ನಣೆಗೊಳಿಸಿದ್ದು, ಸೇವೆಗೆ ಮತ್ತು ತಾಳ್ಮೆಗೆ ಸಂದ ಜಯವೆಂದೇ ಉಲ್ಲೇಖಿಸಬಹುದು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೊಡ್ಡ ಧ್ವನಿ ಮೊಳಗಿಸಿ, ಭದ್ರ ತಳಹದಿಯನ್ನು ಒದಗಿಸಿದ ರಥಯಾತ್ರೆಯ ಸಾರಥಿ.
ಪ್ರಸ್ತುತ, ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾದ ಕೆಲವೇ ದಿನಗಳಲ್ಲಿ ಅತ್ಯುನ್ನತ ಪ್ರಶಸ್ತಿಗೆ ಅಡ್ವಾಣಿ ಅವರ ಹೆಸರು ಘೋಷಣೆಯಾಗಿದ್ದು ಕಾಕತಾಳೀಯವೇನಲ್ಲ. ಅದು ಹಲವರಿಗೆ ನಿರೀಕ್ಷಿತ!
ರಥಯಾತ್ರೆ ಸೇರಿದಂತೆ ಹೋರಾಟದ ಛಲದಿಂದಾಗಿ ಪಕ್ಷದ ವಲಯದಲ್ಲಿ ಹಿಂದುತ್ವದ ಬದ್ಧ ಪ್ರತಿಪಾದಕ, ‘ಲೋಹ ಪುರುಷ’ ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ ನವೆಂಬರ್ 8, 1927ರಂದು ಅವಿಭಜಿತ ಭಾರತದ ಕರಾಚಿಯಲ್ಲಿ (ಈಗಿನ ಪಾಕಿಸ್ತಾನ) ಜನಿಸಿದರು.
ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮುಂದೆ ಸಿಂಧ್ ಪ್ರಾಂತ್ಯದ ಹೈದರಾಬಾದ್ನ ಡಿ.ಜಿ.ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಬಳಿಕ ಬಾಂಬೆಯ (ಈಗಿನ ಮುಂಬೈ) ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದರು. 1947ರಲ್ಲಿ ಆರ್ಎಸ್ಎಸ್ ಸೇರಿದ ಅವರು, ರಾಜಸ್ಥಾನದಲ್ಲಿ ಸಂಘದ ಉಸ್ತುವಾರಿ ವಹಿಸಿಕೊಂಡರು.