ಬೆಂಗಳೂರು | ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಅಧಿಕಾರದ ಹಪಾಹಪಿ, ಕುರ್ಚಿ ಭದ್ರತೆಯ ವಿಷಯವಾಗಿ ಸಾಲ ಮಾಡಿ ತುಪ್ಪ ತಿನ್ನುತ್ತಲೇ ಇವೆ ಎಂಬುವುದು ಹಲವಾರು ಅಂಶಗಳಿಂದ ಸಾಬೀತಾಗುತ್ತಲೇ ಇದೆ. ಈಗಲೂ ಅದು ಸಾಬೀತಾಗುತ್ತ ಬರುತ್ತಿದೆ. ಗ್ಯಾರಂಟಿ ಹಿಂದೆ ಹೋಗಿರುವ ಕಾಂಗ್ರೆಸ್ ಮತ್ತಷ್ಟು ಸಾಲ ಮಾಡುತ್ತಿದೆಯೇ ಎಂಬ ಆತಂಕ ಹಾಗೂ ಚರ್ಚೆಗಳು ಈಗ ಶುರುವಾಗಿವೆ.
ಆರ್ಥಿಕ ಇಲಾಖೆ ಸಿದ್ಧಪಡಿಸಿರುವ ಮಧ್ಯಮಾವಧಿ ವಿತ್ತೀಯ ಯೋಜನೆ ಗಮನಿಸಿದರೆ, ರಾಜ್ಯದಲ್ಲಿನ ಸರ್ಕಾರಗಳು ಇಲ್ಲಯವರೆಗೂ ಮಾಡಿರುವ ಸಾಲಕ್ಕೆ ಮುಂದಿನ 5 ವರ್ಷಗಳಲ್ಲಿ ಕಟ್ಟುವ ಬಡ್ಡಿ ಮೊತ್ತ 3.08 ಲಕ್ಷ ಕೋಟಿ ರೂಪಾಯಿಗೆ ಏರಿದ್ದೇ ಇದಕ್ಕೆ ಸಾಕ್ಷಿಯಾಗುತ್ತಿದೆ. 2025-26ನೇ ಹಣಕಾಸು ವರ್ಷದಿಂದ 2029-30ರ ವರೆಗೂ ಸಾಲಗಳ ಮೇಲೆ ರಾಜ್ಯವು ದೊಡ್ಡ ಮೊತ್ತದ ಬಡ್ಡಿ ಪಾವತಿಸಬೇಕಿದೆ.
ಪಡೆದ ಸಾಲದ ಮೊತ್ತ
2023-24- 90,280
2024-25- 1.03,342
2025-26- 1,16,000
2026-27- 1,32,000 ಸಾಲವನ್ನು ಸರ್ಕಾರ ಮಾಡಿದೆ.
ಇದಕ್ಕಾಗಿ ರಾಜ್ಯ ಸರ್ಕಾರವು ಮುಂದಿನ 5 ವರ್ಷಗ ಬಡ್ಡಿ ಪಾವತಿಸುವ ಕುರಿತು ನೋಡುವುದಾದರೆ…
2025-26- 45,600
2026-27- 53,332
2027-28- 60,798
2028-29- 69,310.. 2029-30- 79,013 ಬಡ್ಡಿ ಪಾವತಿ ಮಾಡಬೇಕಾಗುತ್ತದೆ.
ಆದಾಯಕ್ಕಿಂತ ವೆಚ್ಚ ಹೆಚ್ಚಳವಾದಾಗ ಸಹಜವಾಗಿ ರಾಜ್ಯದ ಬಂಡವಾಳ ಯೋಜನೆಗೆ ಕೊರತೆಯಾಗುತ್ತದೆ. ಹೀಗಾಗಿ ಕೊರತೆಯಾಗುವ ಮೊತ್ತವನ್ನು ಸರ್ಕಾರಗಳು ಸಾಲ ಪಡೆದು ನೀಗಿಸಿಕೊಳ್ಳುತ್ತವೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಮುಕ್ತ ಮಾರುಕಟ್ಟೆ ಹಣಕಾಸು ಸಂಸ್ಥೆಗಳು ಮತ್ತು ಇತರೆ ಮೂಲಗಳಿಂದ ಸಂಗ್ರಹಿಸುವ ಸಾಲವನ್ನು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಬಂಡವಾಳ ಯೋಜನೆಗಳಿಗೆ ವಿನಿಯೋಗಿಸುತ್ತವೆ.
ಉತ್ಪಾದಕ ಸಾಮರ್ಥ್ಯ ಹೆಚ್ಚಿಸಲು, ಸಾರ್ವಜನಿಕ ಸೇವೆಗಳ ಗುಣಮಟ್ಟ ಸುಧಾರಿಸಲು, ದೀರ್ಘ ಕಾಲೀನ ಆರ್ಥಿಕ ಪ್ರಯೋಜನ ಸಾಧಿಸುವುದಕ್ಕಾಗಿ ಈ ಮೊತ್ತ ಬಳಕೆಯಾಗುತ್ತದೆ. ಇದರೊಂದಿಗೆ ಬಂಡವಾಳ ಹೂಡಿಕೆಗಳಿಗೆ ತಕ್ಕಂತೆ ಸಾಲದ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಹೀಗೆ ಕರ್ನಾಟಕ ರಾಜ್ಯ ಸರ್ಕಾರಗಳು 2023-24ರ ಆರ್ಥಿಕ ವರ್ಷದಲ್ಲಿ 90,280 ಕೋಟಿ ಸಾಲ ಪಡೆದಿತ್ತು.
ಈಗ ಪ್ರಸಕ್ತ ಸಾಲಿನ 2026-27ರಲ್ಲಿ 1.32 ಲಕ್ಷ ಕೋಟಿ ಸಾಲ ಪಡೆಯಲಾಗುವುದು ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿದೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ 7.64 ಲಕ್ಷ ಕೋಟಿ ರೂಪಾಯಿ ತಲುಪಲಿದೆ. 2026ರ ಮಾರ್ಚ್ ಅಂತ್ಯಕ್ಕೆ ಒಟ್ಟು ಸಾಲದ ಮೊತ್ತ 8.24 ಲಕ್ಷ ಕೋಟಿ ಆಗಲಿದೆ ಎಂದು ಬಜೆಟ್ ಅಂದಾಜಿಸಲಾಗಿದೆ. ಈ ಸಾಲದ ಮೊತ್ತ ಹೀಗೆ ಮುಂದವರೆದರೆ 2029-30ರ ಸಮಯಕ್ಕೆ ಹೊಣೆಗಾರಿಕೆ ಮೊತ್ತ 10.24 ಲಕ್ಷ ಕೋಟಿ ತಲುಪಲಿದೆ ಎನ್ನಲಾಗುತ್ತಿದೆ. ಬಡ್ಡಿ ಜತೆಗೆ ಸಾಲದ ಅಸಲನ್ನು ಕಂತಿನ ಪ್ರಕಾರ ಪಾವತಿಸುವ ಗುರುತರ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳು ನಿಭಾಯಿಸಬೇಕಿದೆ. 2025-26ನೇ ಸಾಲಿನಲ್ಲಿ ಸಾಲ ಮರುಪಾವತಿ ಮೊತ್ತ 26,474 ಕೋಟಿ ಇತ್ತು. 2026-27ನೇ ಸಾಲಿಗೆ 35,316 ಕೋಟಿಗೆ ತಲುಪಲಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಕಿಡಿಗೇಡಿತನಕ್ಕೆ ಬಲಿಯಾದ ಪ್ರೀತಿಯ ಶಿಕ್ಷಕ.. ತಮಾಷೆಯೇ ಸಾವಾಗಿ ಬದಲಾಯಿತು!



















