ಮಂಡ್ಯ : ಕೌಟುಂಬಿಕ ಕಲಹದಿಂದ ದಂಪತಿ ನೇಣಿಗೆ ಶರಣಾಗಿದ್ದು, ಎರಡು ವರ್ಷದ ಮಗು ಅನಾಥವಾಗಿರು ಘಟನೆ ಮಂಡ್ಯದ ಕೆಆರ್ ಪೇಟೆಯ ಜಯನಗರ ಬಡಾವಣೆಯಲ್ಲಿ ನಡೆದಿದೆ.
ಜಯನಗರ ಬಡಾವಣೆಯ ನಿವಾಸಿ ದಿವ್ಯ ಹಾಗೂ ದರ್ಶನ್ ಮೃತ ದಂಪತಿಗಳು. ಮೆಡಿಕಲ್ ತೆರೆಯುವ ವಿಚಾರಕ್ಕೆ ದಿವ್ಯ ಮತ್ತು ದರ್ಶನ್ ನಡುವೆ ಮನಸ್ತಾಪ ಉಂಟಾಗಿ ಈ ಅವಘಡ ಸಂಭವಿಸಿದೆ.
ಗಂಡನ ಜೊತೆ ಜಗಳ ಮಾಡಿಕೊಂಡು ಪತ್ನಿ ದಿವ್ಯ ಮೊದಲು ನೇಣಿಗೆ ಶರಣಾಗಿದ್ದಾಳೆ. ಪತ್ನಿ ಆತ್ಮಹತ್ಯೆ ಬಳಿಕ ಪತ್ನಿ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿ ಪತಿ ದರ್ಶನ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ಇಬ್ಬರು ನೇಣಿಗೆ ಶರಣಾಗಿದ್ದು, ಇದರಿಂದ ಎರಡು ವರ್ಷದ ಮಗು ಅನಾಥವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಕೆಆರ್ ಪೇಟೆ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಕೆಆರ್ ಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಿಡ್ನ್ಯಾಪ್ ಕೇಸ್ಗೆ ಟ್ವಿಸ್ಟ್ | ಶವವಾಗಿ ಪತ್ತೆಯಾದ ಗೋಪಾಲ್.. ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ



















