ಬೆಂಗಳೂರು : ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಅನಿಲ್ ಕುಮಾರ್ ಅವರ ಹುಟ್ಟುಹಬ್ಬ ಕಚೇರಿಯಲ್ಲೇ ಭರ್ಜರಿವಾಗಿ ಆಚರಿಸಿದ್ದಾರೆ.
ಶಿರಸ್ತೆದಾರ್ ಮತ್ತು ರೆವಿನ್ಯೂ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಆರ್. ಅನಿಲ್ ಕುಮಾರ್, ಇತರೆ ನೌಕರರು ಕಚೇರಿಯಲ್ಲಿ ಕಾಲಹರಣ ಮಾಡಿತ್ತಾ 11 ಕೇಕ್ ಕಟ್ ಮಾಡುವುದು ಸೇರಿದಂತೆ ಭರ್ಜರಿ ಬರ್ತಡೆ ಸಲೆಬ್ರೇಶನ್ ಮಾಡಿದ್ದಾರೆ.
ಕಳೆದ 7 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅನಿಲ್ ಕುಮಾರ್ ಕಚೇರಿಯ ಸಮಯವನ್ನು ಈ ರೀತಿಯಾಗಿ ಬಳಸಿದ ಬಗ್ಗೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶಗಳಿದ್ದರೂ, ಈ ಘಟನೆ ಸರ್ಕಾರಿ ಕಚೇರಿಗಳಲ್ಲಿ ಕಾನೂನು ಪಾಲನೆಯ ಕೊರತೆಯನ್ನು ಹೇರಲಾಗಿದೆ ಎನ್ನುವ ಆರೋಪಕ್ಕೆ ಬಂಡಿಯಾಗುತ್ತಿದೆ.
ಇದನ್ನೂ ಓದಿ : ಸಾಲ ಕೊಡಿಸುವ ನೆಪದಲ್ಲಿ ಉದ್ಯಮಿಗಳಿಗೆ ವಂಚನೆ ಆರೋಪ | ಆರೋಪಿ ಮನೆಗೆ CID ದಾಳಿ



















