ಬೆಂಗಳೂರು : BMTC ಬಸ್ಸಿಗೆ ರೈಲು ಡಿಕ್ಕಿ ಹೊಡೆದ ಘಟನೆ ಕಾಡುಗೋಡಿಯ ಸಾದರಮಂಗಲದಲ್ಲಿ ಇಂದು ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಬಸ್ ಹಿಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಕಾಡುಗೋಡಿಯ ಸಾದರಮಂಗಲದಲ್ಲಿ ಪ್ರಯಾಣಿಕರನ್ನ ಇಳಿಸಿ ಖಾಲಿ ಬಸ್ ಡಿಪೋಗೆ ಹಿಂಬದಿ ಚಲಿಸುವಾಗ ಟಾಟಾ ನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಪೋ ಸಂಖ್ಯೆ 51ಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಇಕ್ಕಟ್ಟಿನಲ್ಲಿ ಹಿಂಬದಿ ಚಲಿಸಿ, ಮುಂದಕ್ಕೆ ಹೋಗುವ ಹಂತದಲ್ಲಿ ರೈಲಿನ ಬರುವಿಕೆಯನ್ನು ಚಾಲಕ ಗಮನಿಸದೇ ಇರುವುದೇ ಡಿಕ್ಕಿಗೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಏಕದಿನ ಕ್ರಿಕೆಟ್ಗೆ ಸಜ್ಜಾಗಿದ್ದಾರೆ ‘ಹಿಟ್ಮ್ಯಾನ್’ ಉತ್ತರಾಧಿಕಾರಿ | ಅಭಿಷೇಕ್ ಶರ್ಮಾ ಕಡೆಗೆ ಆಯ್ಕೆಗಾರರ ಚಿತ್ತ



















