ಬೆಂಗಳೂರು: ಕೆಲ ದಿನಗಳ ಹಿಂದೆ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿ ವಿಚಿತ್ರವಾಗಿ ವರ್ತನೆ ಮಾಡುತ್ತಾನೆ ಎಂದು ಆರೋಪಿಸಿದ್ದ ಪ್ರಕರಣಕ್ಕೀಗಾ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಮುನ್ನೆಲೆಗೆ ಬಂದು ಪ್ರತಿಕ್ರಿಯಿಸಿರುವ ಆರೋಪಿ ಪತಿ ಮಂಜುನಾಥ್ ತನ್ನ ಮೇಲೆ ಆರೋಪ ಮಾಡಿದ್ದ ಪತ್ನಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್ ಗಂಭೀರ ಆರೋಪ ಮಾಡಿದ್ದು, ಈಗಾಗಲೇ ಅವಳಿಗೆ ಮೂರು ಮದುವೆಯಾಗಿದೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡಿದ್ದಳು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೋಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್ ಆರೋಪಿಸಿದ್ದಾರೆ.
ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ಈಗಾಗಲೇ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್ ತನ್ನ ವಿರುದ್ಧ ಕಂಪ್ಲೇಂಟ್ ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್ಗೆ ಕೊಡಿಸಿದ್ದೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್ ಹೇಳಿದ್ದಾರೆ.
ಮದುವೆಗೆ ಎಂದು ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿರೋದು ಕೂಡ ಫೇಕ್ ದಾಖಲೆಗಳನ್ನು ನೀಡಿ. ಅಲ್ಲದೆ ರೌಡಿಶೀಟರ್ ಓರ್ವನಿಂದ ತನಗೆ ಧಮ್ಕಿ ಕೂಡ ಹಾಕಿಸಿದ್ದಾಳೆ ಎಂದು ಆರೋಪಿಸಿ ಮಂಜುನಾಥ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ದೂರು ಸ್ವೀಕರಿಸಿದ ಹಿನ್ನೆಲೆ ಕೋರ್ಟ್ ಮೋರೆ ಹೋಗಲು ನಿರ್ಧಾರ ಮಾಡಿರುವುದಾಗಿ ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ; ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ; ಸವಾರ ಸ್ಥಳದಲ್ಲೇ ಸಾವು



















