ಪುತ್ತೂರು: ನಮಗೆ ಈ ದೇಶದ ಕಾರ್ಯಾಂಗದ ಮೇಲೆ ನಂಬಿಕೆ ಇಲ್ಲ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಇಂದು ಎಸಿ ಕೋರ್ಟ್ಗೆ ಹೋಗುವ ಮುನ್ನ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ತಿಮರೋಡಿ, ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಇಲ್ಲದ ಸುಳ್ಳು ಆರೋಪಗಳನ್ನು ಹೊರಿಸಿ ಷಡ್ಯಂತರ ಮಾಡಿದ್ದಾರೆ. ಇದಕ್ಕೆ ಮಹಾಲಿಂಗೇಶ್ವರ ದೇವರು ಉತ್ತರ ಕೋಡಬೇಕು. ಹಾಗಾಗಿ, ಪಾರ್ಥನೆ ಮಾಡಲು ಬಂದ್ದಿದ್ದೇನೆ ಎಂದು ತಿಳಿಸಿದ್ದಾರೆ.
ತಿಳಿದು ಮಾಡಿದ ತಪ್ಪಿಗೆ ಖಂಡಿತವಾಗಿಯೂ ಶಿಕ್ಷೆ ಇದೆ. ರಾಜಕೀಯದವರಿಗೆ, ಮಾಧ್ಯಮದವರಿಗೆ ಹಾಗೂ ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಈ ಮಹಾಲಿಂಗೇಶ್ವರ ದೇವರು ಶಿಕ್ಷೆ ಕೊಡಬೇಕು. ನಾನು 14 ವರ್ಷದಿಂದ ಮಾಡಿದ ಹೋರಟ ಸತ್ಯ. ಇದು ಆ ದೇವರಿಗೆ ಗೊತ್ತಿದೆ. ಧರ್ಮಸ್ಥಳದಲ್ಲಿ ಅತ್ಯಚಾರ, ಕೊಲೆ, ಅನಾಚಾರ, ಬಡ್ಡಿ ವ್ಯವಹಾರ, ದೀನ ದಲಿತರ ಭೂಮಿ ಒಳ ಹಾಕಿರುವುದು ಸತ್ಯ. ಈ ದೇಶದ, ರಾಜ್ಯದ ಕಾರ್ಯಾಂಗದಲ್ಲಿ ಶಿಕ್ಷೆಯಾಗದಿದ್ದರೂ ಕೂಡ ಈ ದೇವರ ನ್ಯಾಯಾಲಯದಲ್ಲಿ ನ್ಯಾಯ ಸಿಗಲೇ ಬೇಕು ಎಂದು ಹೇಳಿದ್ದಾರೆ.
14 ವರ್ಷದಿಂದ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಾ ಬಂದಿದ್ದೇನೆ ಆದರೆ ಪೊಲೀಸ ಗಡಿಪಾರಿನ ಆದೇಶದಲ್ಲಿ ಹೆಣ್ಣು ಮಕ್ಕಳಿಗೆ ದೌರ್ಜನ್ಯ ಮಾಡಿದ್ದಾರೆ ಎಂದು ದಾಖಲಿಸಿದ್ದಾರೆ ಇದು ನಮ್ಮ ಪೊಲೀಸ್ ವ್ಯವಸ್ಥೆಯ ದುಸ್ಥಿತಿ. ನಾವು ಸನಾತನ ಧರ್ಮದ ಪ್ರತಿಪಾದಕರು, ವಿರೋಧಿಗಳಲ್ಲ ಎಂದು ಕಟುವಾಗಿ ಹೇಳಿದ್ದಾರೆ.
ಎಸ್ಐಟಿ ತನಿಖೆ ಇನ್ನೂ ಪ್ರಾರಂಭವಾಗಿಲ್ಲ. ಬರೀ ಬುರುಡೆ ಹಿಡಿದುಕೊಂಡು ಆಟವಾಡುತ್ತಿದ್ದಾರೆ. ಅತ್ಯಚಾರಿ, ಕೊಲೆ ಆರೋಪಿಗಳನ್ನು ವಿಚಾರಣೆ ಮಾಡಿಲ್ಲ. ಎಸ್ಐಟಿ ಒಳಗೆ ಷಡ್ಯಂತರ ಮಾಡುವ ಅಧಿಕಾರಿಗಳು ಇರುವಾಗ ಎಲ್ಲಿಂದ ತನಿಖೆ ಆಗುತ್ತದೆ. ಸರ್ಕಾರ ಎಸ್ಐಟಿ ರಚನೆ ಮಾಡಿದ್ದು ಧರ್ಮಸ್ಥಳದಲ್ಲಿ 20 ವರ್ಷದಿಂದ ನಡೆದಿರುವ ಅತ್ಯಚಾರ, ಕೊಲೆ, ಅನಾಚಾರಗಳನ್ನು ಹೊರಗೆಳೆಯಲು. ಆದರೆ ಮಾಧ್ಯಮಗಳು ಇದನ್ನೇಲ್ಲಾ ಹಾಳು ಮಾಡಲು ನೋಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ ಭೇಟಿ:
ನಾನು, ಚಿನ್ನಯ್ಯ, ಸೌಜನ್ಯ ತಂದೆ ತಾಯಿ ಎಲ್ಲಾರೂ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಬಳಿ ಎಲ್ಲಾ ವಿಷಯವನ್ನು ಪ್ರಸ್ತಪಿಸಿದ್ದೇವೆ. ಚಿನ್ನಯ್ಯ ಸಹ ಸ್ವಾಮೀಜಿಗಳ ಬಳಿ ಎಲ್ಲಾವನ್ನು ಹೇಳಿದ್ದಾನೆ. ಆಗಾ ಸ್ವಾಮೀಜಿಗಳು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ಯಾರು ಸಹ ಮುಂದೆ ಬಂದು ಮಾತನಾಡುತ್ತಿಲ್ಲ. ಸ್ವಾಮೀಜಿಗಳು ಮಠದಲ್ಲಿ ಕುಳಿತು ರಾಜಕೀಯ ಮಾಡುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ಡಿ.16 ರಂದು ಎಲ್ಲಾ ಸಂಘ, ಸಂಸ್ಥೆಯ, ಮಹಿಳೆಯರು ಸೇರಿ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ನಾವು ಅಪೇಕ್ಷಿಸುತ್ತೇವೆ.
ಇದನ್ನೂ ಓದಿ: ಬೆಂಗಳೂರು | 140 ಕೋಟಿ ರೂ. ವೆಚ್ಚದಲ್ಲಿ ಶಿವಾಜಿನಗರದ ‘ರಸೆಲ್ ಮಾರುಕಟ್ಟೆ’ಗೆ ಹೊಸ ರೂಪ



















