ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಚಂಪಾಷಷ್ಠಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಇಂದು (ಮುಂಜಾನೆ 7:29ರ ಶುಭ ಮುಹೂರ್ತದಲ್ಲಿ ವೈಭವದಿಂದ ಜರುಗಿತು. ಕಾರ್ತಿಕ ಶುದ್ಧ ಷಷ್ಠಿ ದಿನದ ಪ್ರಯುಕ್ತ ನಡೆಯುವ ವಾರ್ಷಿಕ ರಥೋತ್ಸವದಲ್ಲಿ ಅಪಾರ ಭಕ್ತಿಭಾವ, ನಂಬಿಕೆ ಮತ್ತು ಸಂಪ್ರದಾಯಗಳ ಸಂಭ್ರಮ ಮೇಳೈಸಿತ್ತು.
ಬೆಳಗ್ಗೆ ಮೊದಲಿಗೆ ನಡೆದ ಚಿಕ್ಕ ರಥೋತ್ಸವದಲ್ಲಿ ಶ್ರೀ ಉಮಾಮಹೇಶ್ವರ ದೇವರು ಸಂಭ್ರಮದಿಂದ ಮೆರವಣಿಗೆಗಿಳಿದರೆ, ನಂತರದ ಚಂಪಾಷಷ್ಠಿ ಮಹಾರಥೋತ್ಸವದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥದಲ್ಲಿ ಆಸೀನರಾಗಿದ್ದರು.

ರಥ ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಭಕ್ತರು ‘ಹರಿ ಹರಾ ಸುಬ್ರಹ್ಮಣ್ಯ’, ‘ಸ್ಕಂದ ಸ್ವಾಮಿ ಕಿ ಜಯ್’ ಎಂದು ಜಯಘೋಷ ಕೂಗಿದರು. ಸೇವಾ ಭಕ್ತರೇ ಎಳೆದು ಸಾಗಿಸಿದ ರಥ ಸಂಚರಿಸಿದ ಮಾರ್ಗದಲ್ಲೆಲ್ಲ ಭಕ್ತಿ, ಶ್ರದ್ಧೆ, ಸಂಪ್ರದಾಯಗಳ ಆಚರಣೆಯ ಜೊತೆಗೆ ಪ್ರಸಾದ ವಿತರಣೆ ನಡೆಯಿತು. ಭಕ್ತರು ತಾವು ತಂದ ನಾಣ್ಯಗಳು, ಕಾಳುಮೆಣಸು, ಸಾಸಿವೆ ಮುಂತಾದ ವಸ್ತುಗಳನ್ನು ರಥಕ್ಕೆ ಅರ್ಪಿಸಿದರು.
ಇದನ್ನೂ ಓದಿ : ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಬಿಗ್ ರಿಲೀಫ್ | ನಿರ್ದೋಷಿ ಎಂದ ಹೈಕೋರ್ಟ್



















