ಬೆಂಗಳೂರು: ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಬದಲು ʻಇಂದಿರಾ ಆಹಾರ ಕಿಟ್ʼ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಈ ಹಿನ್ನಲೆ ವಿಧಾನಸೌಧದಲ್ಲಿ ಮಾಧ್ಯಮ ವರದಿಗಾರೊಂದಿಗೆ ಮಾತನಾಡಿದ ಮುನಿಯಪ್ಪ, 2023 ರ ಚುನಾವಣೆಯಲ್ಲಿ ಅನ್ನಭಾಗ್ಯ ಯೋಜನೆಯ ಮೂಲಕ 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳಿದ್ದೇವು. ಹಾಗೆಯೇ, ನಾವು ನುಡಿದಂತೆ ನಡೆದಿದ್ದೇವೆ. ಕೇಂದ್ರ ಸರ್ಕಾರ ಕೆಲವು ದಿನಗಳ ಕಾಲ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗದ ಕಾರಣ ಅದರ ಬದಲು ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಅದು ಆದ ನಂತರ ನಾವು ಈ ಕುರಿತು ಒಂದು ಸಮೀಕ್ಷೆ ಮಾಡಿದೆವು ಅದರಲ್ಲಿ 100ಕ್ಕೆ 90 ಗ್ರಾಹಕರು ನಮಗೆ ತೊಗರಿಬೆಳೆ, ಹೆಸರುಬೆಳೆ ಕೊಟ್ಟರೆ ಒಳ್ಳೆದು ಎಂದು ತಮ್ಮ ಅಭಿಪ್ರಾಯ ಹೇಳಿದರು. ಇದರಿಂದ ಪೌಷ್ಟಿಕಾಂಶ ಕೂಡ ಸಿಕ್ಕಂತಾಗುತ್ತದೆ ಹಾಗಾಗಿ, ನಾನು ಸಿಎಂ ಬಳಿ ಈ ಕುರಿತು ಚರ್ಚೆ ಮಾಡಿದ್ದೆ. ಅವರು ಕೂಡ ಅಕ್ಕಿ ಕೊಡುವುದರಿಂದ ಏನು ಆಗುವುದಿಲ್ಲ ಎಂದು ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 1ಲಕ್ಷ 25 ಸಾವಿರ ಬಿಪಿಎಲ್ ಕುಟುಂಬಗಳಿಗೆ ಈ ಯೋಜನೆಯು ಅನ್ವಯ ಆಗಲಿದ್ದು, ಪಾರದರ್ಶಕವಾಗಿ, ಸಮತೋಲದಿಂದ ಈ ಯೋಜನೆಯನ್ನು ತರಲು ಹೊರಟ್ಟಿದ್ದೇವೆ. ಒಂದು ಕಾರ್ಡ್ ನಲ್ಲಿ ಇಬ್ಭರು ಇದ್ದರ ಅರ್ಧ ಕೆಜಿ, 4 ಜನ ಇದ್ದರೆ 1 ಕೆಜಿ, 5 ಕ್ಕಿಂತ ಹೆಚ್ಚು ಜನರಿದ್ದರೆ 1 ವರೆ ಕೆಜಿ ಕೊಡಲಾಗವುತ್ತದೆ. ಈ ತರಹ ಮಾಡುವುದರಿಂದ ಅದು ಮಕ್ಕಳಿಗೆ ಹಾಗೂ ತಾಯಂದಿರಗೆ ಹೋಗುತ್ತದೆ. ಈ ಯೋಜನೆಯು 4 ಕೋಟಿ 48 ಲಕ್ಷ ಗ್ರಾಹಕರಿಗೆ ಹೋಗುತ್ತದೆ. ಇಂದಿರಾಗಾಂಧಿ ಬಡವರಿಗಾಗಿ ಕೆಲಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ಪ್ರತಿ ಒಬ್ಬ ಬಡವರು ಪೌಷ್ಠಿಂಕಾಶ ಆಹಾರ ತಿನ್ನಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.


















