ಮಂಗಳೂರು: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದಕ್ಕಾಗಿ ಮಾರುತಿ ಕಂಬಾಲ್ ಎನ್ನುವ ವ್ಯಕ್ತಿಗೆ ನ್ಯಾಯಾಲಯವು 29,000 ರೂ. ದಂಡ ವಿಧಿಸಿದೆ.
ಜೆಎಂಎಫ್ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಅವರು ಮಾರುತಿ ಕಂಬಾಲ್ಗೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಪ್ರಾಪ್ತ ಯುವಕರಿಗೆ ವಾಹನ ನೀಡುವುದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ. ಇಂದು ಗಂಭೀರ ತಪ್ಪು ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಇಂತಹ ಕೃತ್ಯಗಳಿಗೆ ದಂಡ ವಿಧಿಸುವುವ ಮೂಲಕ ವಚ್ಚರಿಕೆ ನೀಡಲಾಗಿದೆ.