ಮಂಡ್ಯ : ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಮಂಡ್ಯದ ತೊಪ್ಪನಹಳ್ಳಿಯ ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಧರ್ಮಸ್ಥಳದ ವಿರುದ್ದ ಷಡ್ಯಂತ್ರ್ಯ ನಡೆದಿದೆ, “ಈ ಷಡ್ಯಂತ್ರ್ಯಕ್ಕೆ ಪ್ರೊಮೋಷನ್ ಮಾಡುವ ಯೂಟೂಬರ್ ಗಳಿಗೆ ಫಂಡ್ಡಿಂಗ್ ಆಗಿದೆ. ನನಗೂ ಈ ತರಹದ ಪ್ರೊಮೋಷನ್ ಗೆ ಆಫರ್ ಬಂದಿತ್ತು” ಎಂದು ಹೇಳುವುದರ ಮೂಲಕ ಪ್ರಕರಣದ ಬಗ್ಗೆ ಮತ್ತೆ ಹುಬ್ಬೇರಿಸುವಂತೆ ಮಾಡಿದ್ದಾರೆ.
“ಯೂಟ್ಯೂಬರ್ ಗಳಾದ ಸಮೀರ್, ಚಂದನ್ ಗೌಡ, ಅಭಿಗೆ ಫಂಡ್ಡಿಂಗ್ ಆಗಿದೆ. ಈ ಬಗ್ಗೆ ನನಗೂ ಅಭಿ ಮತ್ತು ಚಂದನ್ ಗೌಡಗೆ ಸಮೀರ್ ವಿಡಿಯೋ ಟ್ರೋಲ್ ಮಾಡಲು ಆಫರ್ ಮಾಡಿದ್ದರು. ಅಂದು ಲೋಕಸಭಾ ಚುನಾವಣೆ ವೇಳೆ ಏನೂ ಇಲ್ಲದೆ ಸಾಲ ಮಾಡಿಕೊಂಡಿದ್ದೆ ಎಂದ ಚಂದನ್ ಗೌಡ ಇಂದು ಲಕ್ಷಾಂತರ ರೂ ಖರ್ಚು ಮಾಡಿ ಬಟ್ಟೆ ಅಂಗಡಿ ಹಾಕಿದ್ದಾನೆ. ಅವರು ನನಗೂ ಕೂಡ ಫಂಡ್ಡಿಂಗ್ ಮಾಡಿಸುವ ಬಗ್ಗೆ ನನ್ನ ಬಳಿ ಮಾತನಾಡಿದ್ದರು. ಇದಕ್ಕೆ ನಾನೇ ಸಾಕ್ಷಿ, ಜ್ಯೂಸ್ ಹೋಟೆಲ್ ಒಂದರಲ್ಲಿ ಕುಳಿತು ಈ ಕುರಿತು ಚರ್ಚೆ ಮಾಡಿದ್ದೇವು” ಎಂದು ವಿವರಿಸಿದ್ದಾರೆ.
“ಎರಡು ವರ್ಷಗಳ ಹಿಂದೆ ಸೌಜನ್ಯ ಹೋರಾಟದ ಹೆಸರಲ್ಲಿ ಅವರೆಲ್ಲರೂ ಈ ಪ್ಲಾನ್ ಎಕ್ಸಿಬಿಟ್ ಮಾಡಿದ್ದಾರೆ. ನಾನು ಅವರೆಲ್ಲರ ಈ ಷಡ್ಯಂತ್ರ್ಯ ಕೇಳಿ ನಾನು ಪ್ರೋಮೋಷನ್ ಗೆ ಆಗಲ್ಲ ಎಂದಿದ್ದೇ. ಸಮೀರ್, ಅಭಿ, ಚಂದನ್ ಗೌಡ ಅವರಿಗೆ ತಿಮರೋಡಿ ಮತ್ತು ಮಟ್ಟಣನವರ್ ಅವರು ಬಾಸ್ ಆಗಿದ್ದಾರೆ. ಸಮೀರ್ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಅವರೆಲ್ಲಾರು ಬಂದು ಅವನ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕು, ಧರ್ಮಸ್ಥಳದ ವಿರುದ್ದ ಇವರಲ್ಲ ಸೇರಿ ಷಡ್ಯಂತ್ರ್ಯ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.


















