ಬೆಂಗಳೂರು : ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಆರ್.ಸಿ.ಬಿ ಅಭಿಮಾನಿಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಿತ್ತು.
ನ್ಯಾ. ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠದಲ್ಲಿ ಡಿ. ಕುನ್ಹಾ ವರದಿ ರದ್ದು ಕೋರಿ ಡಿಎನ್ಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಡಿಎನ್ಎ ಪರ ಹಿರಿಯ ವಕೀಲ ಸಂಪತ್ ಕುಮಾರ್ ವಾದ ಮಂಡನೆ ಮಾಡಿದರು. ನ್ಯಾಯಾಲದ ನಿರ್ದೇಶನದಂತೆ ಅಫಿಡವಿಟ್ ಸಲ್ಲಿಸಿದರು. ಕಾಲ್ತುಳಿತ ಪ್ರಕರಣ ಹಾಗೂ ಘಟನೆಯ ನಂತರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೀಠಕ್ಕೆ ಇಂಚಿಂಚೂ ಮಾಹಿತಿ ನೀಡಿದರು.
ಈವರೆಗೂ ವಿಚಾರಣಾ ನಿಯೋಗದ ಕಾಪಿ ನೀಡಿಲ್ಲ. ಡಿಎನ್ಎ ನಿರ್ದೇಶಕ ಸುನೀಲ್ ಮ್ಯಾಥ್ಯೂ ಹೇಳಿಕೆಯ ದಾಖಲೆ ಕೇಳಿದ್ದೇವು. ಅದನ್ನೂ ನೀಡಿಲ್ಲ. ವಿಚಾರಣಾ ಆಯೋಗ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ನಮ್ಮ ಸಾಕ್ಷಿ ಹೇಳಿಕೆ ಮತ್ತು ನಮ್ಮ ವಿರುದ್ಧ ಸಾಕ್ಷಿ ನೀಡಿದವರ ಪಾಟೀ ಸವಾಲಿಗೆ ಕಾಯ್ದೆ ಅವಕಾಶ ನೀಡಲಾಗಿದೆ. ಆದರೆ ನ್ಯಾ. ಕುನ್ಹಾ ವರದಿಯಲ್ಲಿ ಅದಕ್ಕೆ ಅವಕಾಶ ನೀಡಿಲ್ಲ. ಇದು ಸ್ವಾಭಾವಿಕ ನ್ಯಾಯತ್ವದ ವಿರುದ್ಧದ ವರದಿ ಮತ್ತು ಅದನ್ನು ಆಧರಿಸಿ ಕೈಗೊಂಡಿರುವ ಕ್ರಮದ ದಾಖಲೆಯನ್ನು ಸಲ್ಲಿಸಿ ವಾದ ಮಂಡಿಸಿದರು.



















