ರಾಜಕಾರಣಿಗಳು ಅಂದರೆ ಜನರಿಗೆ ಅಸಡ್ಡೆ. ರಾಜಕಾರಣಿಗಳು ಅಂದರೆ ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ ಎನ್ನುವ ಆರೋಪವನ್ನು ಬದಿಗೆ ಸರಿಸುವಂತೆ ಶಾಸಕ ಗಂಟಿಹೊಳೆಯವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಒಬ್ಬ ಜನಪ್ರತಿನಿಧಿ ಚುನಾವಣೆಯ ಬಳಿಕವೂ ಜನ ಸಂಪರ್ಕ ಇಟ್ಟುಕೊಳ್ಳಬೇಕೆಂಬ ಅವರ ಸಂಕಲ್ಪ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.
ಬೈಂದೂ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ನೇತೃತ್ವದಲ್ಲಿ ಅತ್ತಿಗುಪ್ಪೆ ಬಂಟರ ಸಭಾಭವನದಲ್ಲಿ ಬೈಂದೂರು ಕ್ಷೇತ್ರದವರೆಲ್ಲಾ ಒಂದುಗೂಡುವ ʼಸಂಕಲ್ಪʼ ಎನ್ನುವ ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರಾವಳಿ ಜನರು ತುಂಬಾ ದೈವ ಭಕ್ತರು . ನಮ್ಮ ತಂದೆಯವರು ಕೂಡ ತುಂಬಾ ದೈವ ಭಕ್ತರು. ಕರಾವಳಿ ಪ್ರವಾಸೋದ್ಯಮವನ್ನು ಬೆಳಸಬೇಕೆಂದು ತುಂಬ ಕೆಲಸ ಮಾಡಿದ್ದಾರೆ. ನಮ್ಮ ಅಣ್ಣ ರಾಘಣ್ಣ 4 ಭಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಅದಕ್ಕೆ ನೀವೇ ಕಾರಣ ನಿಮ್ಮ ಪ್ರೀತಿ ಕಾರಣ. ಅದಕ್ಕೆ ಧನ್ಯವಾದಗಳು ಎಂದು ಬೈಂದೂರು ಕ್ಷೇತ್ರದ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೆಂಗಳೂರಿನಲ್ಲಿ ಇದ್ದುಕೊಂಡೇ ಬೈಂದೂರಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವ ಹಿತೈಷಿಗಳ ಸಂಪರ್ಕದ ಸಂವಾದ ಕಾರ್ಯಕ್ರಮವಿದು. ನಮ್ಮೂರು ನಮ್ಮ ಸಂಸ್ಕೃತಿಯನ್ನು ಬೆಸೆಯುವ ಸಂಕಲ್ಪವಿದು. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿಗೆ ಬರುತ್ತಾರೆ ಎನ್ನುವುದು ಜನರ ಸಾಮಾನ್ಯ ಆರೋಪ. ರಾಜಕಾರಣಿಗಳು ಚುನಾವಣೆಗಷ್ಟೇ ಅಲ್ಲ. ನಿರಂತರ ಜನರೊಂದಿಗೆ ಸಂಪರ್ಕವಹಿಸುವುದು ಒಬ್ಬ ಚುನಾಯಿತ ಪ್ರತಿನಿಧಿಯ ಜವಾಬ್ದಾರಿ ಎಂದು ಹೇಳಿದ್ದಾರೆ.
ನಮ್ಮ ಅದೃಷ್ಟವೋ ಏನೋ ನಮ್ಮ ಬೈಂದೂರು ಶಿವಮೊಗ್ಗ ಜಿಲ್ಲೆಗೆ ಸೇರಿಬಿಟ್ಟಿದೆ . ನಮಗೆ ಒಳ್ಳೆಯ ಸಂಸದ ಸಿಕ್ಕಿದರೆ ಅವರ ಕುಟುಂಬ ನಮಗೆ, ನಮ್ಮ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬೈಂದೂರು ಕ್ಷೇತ್ರಕ್ಕೆ ಯಡಿಯೂರಪ್ಪ ಅವರ ಕೊಡುಗೆಯನ್ನು ಶಾಸಕರು ಸ್ಮರಿಸಿಕೊಂಡರು.
ಸಭೆಯ ಬಳಿಕ ಶ್ರೀ ರಾಮ ಕುಣಿತ ಭಜನೆ, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಪ್ರವೀಣ್ ಶೆಟ್ಟಿ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಶಿವಾನಂದ ಶೆಟ್ಟಿ ಮತ್ತು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಕೆ ಆರ್ ಸೇರಿದಂತೆ ಬೆಂಗಳೂರು ಹಿತೈಷಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


















