ನಾರಾ ಲೋಕೇಶ್ ಟ್ವೀಟ್ ಗೆ ನನ್ನ ಟ್ವೀಟ್ ಕೂಡ ರೆಡಿ ಆಗುತ್ತಿದೆ. ನಾನೂ ಟ್ವೀಟ್ ಮೂಲಕವೇ ಉತ್ತರ ಕೊಡುತ್ತೇನೆ. ನಾರಾ ಲೋಕೆಶ್ ಗೆ ಸ್ವಲ್ಪವೇ ಸಮಯದಲ್ಲಿ ರಿಪ್ಲೈ ಮಾಡುತ್ತೇನೆ. ಫಿಶಿಂಗ್ ಇನ್ ಟ್ರಬಲ್ ವಾಟರ್ ಅಂತಾರೆ. ನಮ್ಮಲ್ಲಿ ಟ್ರಬಲ್ ವಾಟರ್ ಇಲ್ಲ, ವಾಟರ್ ಕಾಮ್ ಆಗಿದೆ. ಕರ್ನಾಟಕ ರಾಜ್ಯ ಏರೋಸ್ಪೇಸ್ ಡಿಫೆನ್ಸ್ ಕ್ಷೇತ್ರದಲ್ಲಿ ರಾಜ್ಯದ ಶೇರು ೬೫% ಇದೆ. ಜಾಗತೀಕ ಮಟ್ಟದಲ್ಲಿ ಮೂರನೇ ಇಕೋ ಸಿಸ್ಟಮ್ ನಮ್ಮದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಾಪಾಸ್ ಪಡೆದ ಬೆನ್ನಲ್ಲೇ ನಾರಾ ಲೋಕೇಶ್ ಏರೋಸ್ಪೇಸ್ ಕಂಪೆನಿಗಳಿಗೆ ಗಾಳ ಹಾಕುವ ಪ್ರಯತ್ನ ಮಾಡಿದ್ದರು.
ನಾರಾ ಲೋಕೇಶ್ ಅವರ ಟ್ವೀಟ್ ಗೆ ತಿರುಗೇಟು ನೀಡಿದ ಪಾಟೀಲ್, ಕೇವಲ ಏರೋಸ್ಪೇಸ್ ಅಷ್ಟೇ ಅಲ್ಲ, ಬೇರೆ ಯಾವುದೇ ಇಂಡಸ್ಟ್ರಿ ಇರಲಿ. ಭೂಮಿ ಸಲುವಾಗಿ ಒಂದೇ ಒಂದು ಇಂಡಸ್ಟ್ರಿ ರಾಜ್ಯದಿಂದ ಹೊರಗೆ ಹೋಗಲು ಬಿಡುವುದಿಲ್ಲ. ನಮ್ಮಲ್ಲಿ ಲ್ಯಾಂಡ್ ಬೇಕಾದಷ್ಟು ಇದೆ, ಲ್ಯಾಂಡ್ ಕೊಡುತ್ತೇವೆ ಬೇರೆ ಎಲ್ಲ ಸೌಲಭ್ಯಗಳೂ ಇವೆ.
ಎಲ್ಲ ಪ್ಲ್ಯಾನ್ ನಮ್ಮಲ್ಲಿ ಇದೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾರಾ ಲೋಕೇಶ್ ಅವರ ಆಹ್ವಾನಕ್ಕೆ ಯಾರೂ ರಾಜ್ಯ ಬಿಟ್ಟು ಹೋಗುವುದು ಇಲ್ಲ. ಭೂಮಿಯಷ್ಟೇ ಅಲ್ಲ, ನೀರೂ ಕೂಡ ಬೇಕಾದಷ್ಟು ಸೌಲಭ್ಯ ನೀಡಿದ್ದೇವೆ. ಕಾವೇರಿ ನೀರನ್ನೂ ಕೂಡ ಕೊಡುತ್ತಿದ್ದೇವೆ. ಒಂದೇ ಒಂದು ಇಂಡಸ್ಟ್ರಿ ಗೆ ಅವರು ಕೇಳಿದಲ್ಲಿ ಭೂಮಿ ಕೊಡುತ್ತೇವೆ ಎಂದಿದ್ದಾರೆ.
ರಾಜ್ಯ ಬಹಳ ಸಮರ್ಥ ಇದೆ, ಎಂ.ಬಿ ಪಾಟೀಲ್ ಕೂಡ ಅಷ್ಟೇ ಸಮರ್ಥವಾಗಿದ್ದಾನೆ. ಇಷ್ಟು ಬದ್ದತೆಯಿಂದ ಹೇಳಿದ್ದೇನೆ, ಯಾವುದೇ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ. ಬರೀ ಭೂಮಿ ಇದ್ದರೆ ಹೋಗುವುದಿಲ್ಲ. ಇಕೋ ಸಿಸ್ಟಮ್ ಇಂಪಾರ್ಟಂಟ್. ಪರ್ಯಾಯ ಭೂಮಿ ಎಲ್ಲಿಯೇ ಕೇಳಿದರೂ ನಾವು ಕೊಡಲು ನಾವು ಈಗಾಗಲೇ ಯೋಜನೆ ರೂಪಿಸಿದ್ದೇವೆ. ಇಂಡಸ್ಟ್ರಿ ಗಳಿಗೆ ಎಷ್ಟು ಬೇಕೋ ಅಷ್ಟು ಜಮೀನು ಕೊಡುತ್ತೇವೆ. ಎಚ್ಎಎಲ್ ನವರೂ ಕೂಡ ತೃಪ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.



















