ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮೇಲೆ ಭಾರತ ಪಕ್ಕಾ ಗುರಿ ಫಿಕ್ಸ್ ಮಾಡಿ ಅಟ್ಯಾಕ್ ಮಾಡಿದ್ದು ಹೇಗೆ? ಹೌದು ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡದೆ ಇರದು. ಪಿಓಕೆಯಲ್ಲಿರುವ ಲಷ್ಕರ್ ಮತ್ತು ಜೈಶ್ ಸಂಘಟನೆಯ ಅಡಗುತಾಣಗಳ ಮಾಹಿತಿಯನ್ನು ಭಾರತಕ್ಕೆ ಕೊಟ್ಟಿದ್ದಾದರೂ ಯಾರು? ಕ್ಷಿಪಣಿ ದಾಳಿಗೆ ಪಕ್ಕಾ ಲೊಕೇಷನ್ ಫಿಕ್ಸ್ ಮಾಡಿ ಅಟ್ಯಾಕ್ ಮಾಡಿದ್ದು ಹೇಗೆ ಅನ್ನೋ ಕೌತುಕಕ್ಕೆ ಕಡೆಗೂ ತೆರೆಬಿದ್ದಿದೆ.
ಭಾರತೀಯ ಸೇನೆಗೆ ಸಿಕ್ಕಿತ್ತು ಖಚಿತ ಲೊಕೇಷನ್
ಯೆಸ್…ಆಪರೇಷನ್ ಸಿಂಧೂರ್..ಪಾಕಿಸ್ತಾನಕ್ಕೆ ದುಃಸ್ಪಪ್ನವಾಗಿ ಕಾಡುವ ಆಪರೇಷನ್ ಸಿಂಧೂರ್ ಕೇವಲ ಒಂದೇ ರಾತ್ರಿಯ ಯೋಜನೆಯಲ್ಲ. ಇದರ ಹಿಂದೆ ಹಲವು ದಿನಗಳ ನಿರಂತರ ಪರಿಶ್ರಮ ಮತ್ತು ಹತ್ತಾರು ವಿಭಾಗಗಳ ಸಂಘಟಿತ ಸಹಕಾರವಿದೆ. ಭಾರತೀಯ ಸೇನೆಯ ಈ ಚಾರಿತ್ರಿಕ ದಾಳಿಗೆ ಕಣ್ಣಾಗಿದ್ದು ಮಾತ್ರ ನಮ್ಮ ಹೆಮ್ಮೆಯ ಇಸ್ರೋ. ಹೌದು, ಪಾಕಿಸ್ತಾನದ ಉಗ್ರರ ಅಡಗುದಾಣಗಳ ನಿಖರ ಮಾಹಿತಿಯನ್ನು ಸೇನೆಗೆ ನೀಡುವ ಮೂಲಕ ಕತ್ತಲಲ್ಲೂ ಕಣ್ಣಾಗಿದ್ದು ಇದೇ ಇಸ್ರೋ. ಇಸ್ರೋ ನೀಡಿದ ಮಾಹಿತಿ ಆಧರಿಸಿಯೇ ಪಾಕಿಸ್ತಾನವನ್ನು ಚೆಂಡಾಡಲಾಗಿದೆ. ಈ ಕಾರ್ಯಕ್ಕೆ ನಮ್ಮ ಇಸ್ರೋದ 10ಕ್ಕೂ ಹೆಚ್ಚು ಉಪಗ್ರಹಗಳು ಹಗಲಿರುಳು ದುಡಿದಿವೆ.
ಬೆಂಗಳೂರಲ್ಲಿ ಆಪರೇಷನ್ ಸಿಂಧೂರ್ ದ ಕಣ್ಣು
ಅಚ್ಚರಿಯಾದರೂ ಇದು ಸತ್ಯ. ಆಪರೇಷನ್ ಸಿಂಧೂರ್ ನ ಕಣ್ಣು ನಮ್ಮ ಬೆಂಗಳೂರಿನಲ್ಲಿತ್ತು. ಕಾರ್ಗತ್ತಲಲ್ಲಿ ಉಗ್ರರ ಠಿಕಾಣಿಗಳನ್ನು ಸುಟ್ಟು ಕರಕಲಾಗಿಸಿದ್ದರ ಹಿಂದಿನ ಶ್ರೇಯ ಇಸ್ರೋಗೆ ಸೇರಬೇಕು. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮೊರೆ ಹೋಗಿತ್ತು ಸೇನೆ. ತನ್ನ ಉಪಗ್ರಹಗಳನ್ನು ಪಾಕ್ ನತ್ತ ತಿರುಗಿಸಿದ್ದ ಇಸ್ರೋ, ಅದರಲ್ಲಿದ್ದ ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ಉಗ್ರರ ತಾಣಗಳ ಫೋಟೋ ಜೊತೆ ಲೊಕೇಷನ್ ಗಳನ್ನೂ ಹಂಚಿಕೊಂಡಿತ್ತು. 0.6ರಿಂದ 0.35 ಮೀಟರ್ ವರೆಗಿನ ಸ್ಪಷ್ಟತೆಯೊಂದಿಗೆ ಸೇನಾ ನೆಲೆ, ಅಡಗುದಾಣ, ಶಸ್ತ್ರಾಸ್ತ್ರ ಡಿಪೋಗಳು, ರಡಾರ್ ಕೇಂದ್ರಗಳು, ಲಾಂಚ್ ಪ್ಯಾಡ್ ಗಳ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಅಷ್ಟೇ ಅಲ್ಲಾ ದಿನದ 24 ಗಂಟೆ ಸೇನೆಯ ಕಣ್ಣಾಗಿ ಈ ಉಪಗ್ರಹಗಳು ಕಾರ್ಯ ನಿರ್ವಹಿಸಿದ್ವು. ಇದರ ಪರಿಣಾಮವಾಗೇ ಭಾರತ ತನ್ನ ಆಪರೇಷನ್ ಸಿಂಧೂರವನ್ನ ಇಸ್ಲಾಮಾಬಾದ್, ಲಾಹೋರ್, ಕರಾಚಿ, ರಾವಲ್ಪಿಂಡಿಯಗಳನ್ನು ಹಿಟ್ ಲಿಸ್ಟ್ ನಲ್ಲಿಟ್ಟು ಉಡಾಯಿಸಿದ್ದು. ಈ ಮೂಲಕ ಭಾರತೀಯ ಸೇನೆಯ ಚಾರಿತ್ರಿಕ ಕಾರ್ಯಾಚರಣೆಗೆ ನಮ್ಮ ಬೆಂಗಳೂರಿನ ಇಸ್ರೋ ಬೆನ್ನೆಲುಬಾಗಿ ನಿಲ್ಲೋ ಮೂಲಕ ಶಹಬಾಶ್ ಎನ್ನಿಸಿಕೊಂಡಿದೆ.