ಒಂದಲ್ಲಾ ಎರಡಲ್ಲಾ 75 ವರ್ಷಗಳಿಂದ ಇದೇ ಕಳ್ಳಾಟ ಆಡುತ್ತಾ ಬಂದಿದೆ ಪಾಕಿಸ್ತಾನ. ಕಾಲ್ಕೆರೆದು ಜಗಳಕ್ಕೆ ನಿಲ್ಲುವ ನರಿ ಬುದ್ಧಿಯ ಮಾನಗೇಡಿಗಳಿಗೆ ಭಾರತವೀಗ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದೊಳಗೇ ನುಗ್ಗಿ ಚೆಂಡಾಡುವ ಕೆಲಸವನ್ನು ಭಾರತ ಆರಂಭಿಸಿದೆ.
ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಆತ್ಮಾಹುತಿ ಡ್ರೋನ್ ದಾಳಿ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವೀಗ ನೇರ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ, ಕರಾಚಿಯೊಳಗೆ ನುಗ್ಗಿ ಬೇಟೆಯಾಡುತ್ತಿದೆ. ಇದರ ಪರಿಣಾಮವೇ ಲಾಹೋರ್ ನ ಮಾರುಕಟ್ಟೆಗಳು ಸ್ತಬ್ಧವಾಗಿವೆ. ಪಾಕ್ ಷೇರುಪೇಟೆ ಸಂಪೂರ್ಣ ಮಕಾಡೆ ಮಲಗಿದೆ. ಜನಜೀವನ ಅಯೋಮಯವಾಗಿದೆ.
ಗಡಿಯಲ್ಲಿ ಎಲ್ 70 ಗನ್ ಗಳ ನಿಯೋಜನೆ
ಭಾರತ-ಪಾಕ್ ಗಡಿಯಲ್ಲಿ ಈಗ ಅತ್ಯಾಧುನಿಕ ಎಲ್ 70 ಗನ್ ಕಾವಲಿಗೆ ನಿಂತಿದೆ. ಪಾಕಿಸ್ತಾನದ ಸಂಭಾವ್ಯ ವಾಯು ದಾಳಿಯನ್ನು ಹಿಮ್ಮೆಟ್ಟಿಸುವ ತಾಕತ್ತಿನ ಈ ಎಲ್ 70 ಗನ್ ಗಳು ಈಗ ಸರ್ವಸನ್ನದ್ಧವಾಗಿವೆ. ಪಾಕಿಗಳ ಡ್ರೋನ್, ಕ್ಷಿಪಣಿ, ತಳ ಹಂತದಲ್ಲಿ ಹಾರಾಟ ಮಾಡೋ ವಿಮಾನಗಳನ್ನು ಕ್ಷಣಾರ್ಧದಲ್ಲಿ ಪೀಸ್ ಪೀಸ್ ಮಾಡುವ ತಾಕತ್ತು ಈ ಗನ್ ಗಳಿವೆ. ರಾಜಸ್ಥಾನ, ಜಮ್ಮು, ಪಂಜಾಬ್ ನಲ್ಲಿ ಈ ಗನ್ ಗಳು ಕಾರ್ಯಸನ್ನದ್ಧವಾಗಿವೆ.
ಎದುರಾಳಿಗಳ ಎದೆ ನಡುಗಿಸುವ ಸ್ಕಿಲ್ಕಾ ಸಿಸ್ಟಂ
ಇದು ನಿಜಕ್ಕೂ ಅಂತಿಂಥಾ ಅಸ್ತ್ರ ಅಲ್ಲವೇ ಅಲ್ಲ. ಎದುರಾಳಿ ಎಂಥಾ ಎಂಟೆದೆ ಬಂಟನೇ ಆದರೂ ಅಂಥವನ ಎದೆಯನ್ನೇ ನಡುಗಿಸುವ ತಾಕತ್ತು ಈ ಸ್ಕಿಲ್ಕಾ ಅಸ್ತ್ರಕ್ಕಿದೆ. ವಾಹನದ ಮೇಲೆ ನಿಯೋಜಿತವಾಗಿರುವ ಈ ಅಸ್ತ್ರ ರೆಡಾರ್ ಸಿಗ್ನಲ್ ಆಧರಿಸಿ ಎದುರಾಳಿಗಳ ಜಂಗಾಬಲವನ್ನೇ ಪುಡಿಮಾಡಬಲ್ಲದು. ಸ್ಕಿಲ್ಕಾ ಸಿಸ್ಟಂ 23 ಎಂಎಂನ ಆಟೋಮ್ಯಾಟಿಕ್ ಗನ್ ಒಳಗೊಂಡಿದ್ದು, ಶತ್ರುಗಳ ಸಂಭಾವ್ಯ ವಾಯುದಾಳಿಯನ್ನು ಊಸ್ಟ್ ಮಾಡಬಲ್ಲದು.
ಎಸ್-400 ಸುದರ್ಶನ ಚಕ್ರದ ಭದ್ರಕೋಟೆ
ರಷ್ಯಾ ನಿರ್ಮಿತ ಎಸ್-400 ಒಂದು ಖಂಡಾಂತರ ಕ್ಷಿಪಣಿ ದಾಳಿ ಅಸ್ತ್ರವಾಗಿದೆ. ಭಾರತೀಯ ಸೇನೆ ಈ ಅಸ್ತ್ರಕ್ಕೆ ಸುದರ್ಶನ ಚಕ್ರ ಅಂತಲೇ ನಾಮಕರಣ ಮಾಡಿದೆ. ಶತ್ರುಗಳು 400 ಕಿಲೋಮೀಟರ್ ದೂರದಲ್ಲಿದ್ದರೂ ಇಲ್ಲಿಂದಲೇ ನಿಗದಿತ ದಾಳಿ ನಡೆಸುವ ತಾಕತ್ತು ಈ ಸುದರ್ಶನ ಚಕ್ರಕ್ಕಿದೆ. ಭಾರತದ ಬತ್ತಳಿಕೆಯಲ್ಲಿ ಇಂಥಾ ಐದು ಸುದರ್ಶನ ಚಕ್ರಗಳಿದ್ದು, 2021ರಲ್ಲಿ ಮೊದಲ ಬಾರಿ ಪಂಜಾಬ್ ನಲ್ಲಿ ನಿಯೋಜಿಸಲಾಗಿತ್ತು.
ನಿನ್ನೆಯ ಪಾಕ್ ವಿರುದ್ಧದ ದಾಳಿಯಲ್ಲಿ ಈ ಸುದರ್ಶನ ಚಕ್ರದ ಪಾತ್ರ ಮಹತ್ವದ್ದಾಗಿದೆ. ಒಟ್ಟಿನಲ್ಲಿ ಭಾರತದ ಕಣ್ಣುತಪ್ಪಿಸಿ ಪಾಕಿಸ್ತಾನದ ಒಂದೇ ಒಂದು ಇರುವೆಯೂ ಒಳಬಾರದಂತೆ ಸೇನೆ ಏಳುಸುತ್ತಿನ ಭದ್ರಕೋಟೆಯನ್ನು ನಿರ್ಮಿಸಿದೆ.